ಬೆಂಗಳೂರು: ಮಧ್ಯಮ ಕ್ರಮಾಂಕದ ಡಿ.ಅವಿನಾಶ್ ಮತ್ತು ಕೆಳ ಕ್ರಮಾಂಕದ ಸುಜಯ್ ಸಾತೇರಿ ಅಜೇಯ ಜೊತೆಯಾಟದ ನೆರವಿನಿಂದ ಭಾರಿ ಮೊತ್ತ ಕಲೆ ಹಾಕಿರುವ ಕರ್ನಾಟಕ ತಂಡ ಸಿ.ಕೆ.ನಾಯ್ಡು ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಗೆಲುವಿನ ನಿರೀಕ್ಷೆಯಲ್ಲಿದೆ.
ಇಲ್ಲಿನ ಆಲೂರು ಕ್ರೀಡಾಂಣದಲ್ಲಿ ನಡೆಯುತ್ತಿರುವ ಅಸ್ಸಾಂ ಎದುರಿನ ಪಂದ್ಯದ ಮೂರನೇ ದಿನವಾದ ಶುಕ್ರವಾರ ಆತಿಥೇಯರು ಏಳಕ್ಕೆ 480 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡರು. ಈ ಮೂಲಕ 233 ರನ್ಗಳ ಮೊದಲ ಇನಿಂಗ್ಸ್ ಮುನ್ನಡೆ ಸಾಧಿಸಿದರು.
ಎರಡನೇ ಇನಿಂಗ್ಸ್ ಆರಂಭಿಸಿರುವ ಅಸ್ಸಾಂ ದಿನದಾಟದ ಮುಕ್ತಾಯಕ್ಕೆ ಒಂದು ವಿಕೆಟ್ ಕಳೆದುಕೊಂಡು 79 ರನ್ ಗಳಿಸಿದೆ. ತಂಡ 154 ರನ್ಗಳ ಹಿನ್ನಡೆ ಅನುಭವಿಸಿದೆ.
ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಅಸ್ಸಾಂ: 247; ಕರ್ನಾಟಕ: 143 ಓವರ್ಗಳಲ್ಲಿ 7ಕ್ಕೆ 480 (ಡಿ.ಅವಿನಾಶ್ ಅಜೇಯ 54, ಸುಜಯ್ ಸಾತೇರಿ ಅಜೇಯ 40; ರಾಜ್ ಅಗರವಾಲ್ 47ಕ್ಕೆ2, ಹೃದೀಪ್ ದೇಕಾ 81ಕ್ಕೆ2); ಅಸ್ಸಾಂ: ಎರಡನೇ ಇನಿಂಗ್ಸ್: 40 ಓವರ್ಗಳಲ್ಲಿ ಒಂದು ವಿಕೆಟ್ಗೆ 79 (ವಿಪ್ಲವ್ ಸೈಕಿಯಾ ಔಟಾಗದೆ 50, ಪ್ರಸೇನ್ ಜೀತ್ ಸರ್ಕಾರ್ 26).
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.