ADVERTISEMENT

ಇಸ್ಕಾನ್ ಸಂಸ್ಥೆಯ ಮೂಲಕ ಗಂಗೂಲಿ ನೆರವು

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2020, 20:00 IST
Last Updated 4 ಏಪ್ರಿಲ್ 2020, 20:00 IST
ಸೌರವ್ ಗಂಗೂಲಿ
ಸೌರವ್ ಗಂಗೂಲಿ   

ಕೋಲ್ಕತ್ತ: ಇಸ್ಕಾನ್ ಸಂಸ್ಥೆಯ ಮೂಲಕಜನರಿಗೆ ಆಹಾರ ನೀಡಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧ್ಯಕ್ಷ ಸೌರವ್ ಗಂಗೂಲಿ ನೆರವು ನೀಡಿದ್ದಾರೆ.

‘ಸಂಸ್ಥೆಯು ಪ್ರತಿದಿನ ಹತ್ತು ಸಾವಿರ ಜನರಿಗೆ ಊಟ ನೀಡುತ್ತದೆ. ಇವತ್ತು ಸೌರವ್ ದಾದಾ ಇಲ್ಲಿಗೆ ಬಂದು ಉದಾರ ನೆರವು ನೀಡಿದ್ದಾರೆ. ಇದರಿಂದಾಗಿ ಲಾಕ್‌ಡೌನ್‌ ಸಂದರ್ಭದಲ್ಲಿ ಪ್ರತಿದಿನ 20 ಸಾವಿರ ಮಂದಿಗೆ ಆಹಾರ ಸಿದ್ಧಪಡಿಸುವ ಸಾಮರ್ಥ್ಯ ಬಂದಿದೆ’ ಎಂದು ಇಸ್ಕಾನ್ ವಕ್ತಾರ ರಾಧಾರಮಣ ದಾಸ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT