ADVERTISEMENT

ಕ್ರಿಕೆಟಿಗ ಕಸ್ತೂರಿರಂಗನ್ ಇನ್ನಿಲ್ಲ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2020, 21:31 IST
Last Updated 19 ಆಗಸ್ಟ್ 2020, 21:31 IST
ಜಿ. ಕಸ್ತೂರಿರಂಗನ್
ಜಿ. ಕಸ್ತೂರಿರಂಗನ್   

ಬೆಂಗಳೂರು: ಮಾಜಿ ಕ್ರಿಕೆಟಿಗ, ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್ ನಿರ್ಮಾತೃ, ಜಿ. ಕಸ್ತೂರಿರಂಗನ್ (89) ಬುಧವಾರ ಚಾಮರಾಜಪೇಟೆಯಲ್ಲಿರುವ ಅವರ ಮನೆಯಲ್ಲಿ ಹೃದಯಾಘಾತದಿಂದ ನಿಧನರಾದರು. ಅವರಿಗೆ ಪತ್ನಿ, ಇಬ್ಬರು ಪುತ್ರರು ಮತ್ತು ಒಬ್ಬ ಪುತ್ರಿ ಇದ್ದಾರೆ.

1948 ರಿಂದ 63ರವರೆಗೆ ಮೈಸೂರು ರಾಜ್ಯ ತಂಡದಲ್ಲಿ ಅವರು ಮಧ್ಯಮವೇಗದ ಬೌಲರ್ ಆಗಿದ್ದರು. 1969ರಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್‌ ನಿರ್ಮಾಣದ ಉಸ್ತುವಾರಿ ವಹಿಸಿದ್ದರು. ನಂತರ 2001ರವರೆಗೆ ಅವರೇ ಕ್ಯುರೇಟರ್‌ ಕೂಡ ಆಗಿದ್ದರು.

ಗುಲಾಬಿ ಹೂವು ತಳಿಗಳ ಅಭಿವೃದ್ಧಿಯಲ್ಲಿಯೂ ಅವರು ತೊಡಗಿಕೊಂಡಿದ್ದರು. ಹಲವು ದೇಶಗಳಿಗೆ ಇವರ ತೋಟದಲ್ಲಿ ಬೆಳೆದ ಗುಲಾಬಿ ಹೂವುಗಳು ರಫ್ತಾಗುತ್ತವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.