ADVERTISEMENT

ಜೀವನದುದ್ದಕ್ಕೂ ಧೋನಿಗೆ ಚಿರಋಣಿಯಾಗಿರುವೆ: ಆರ್. ಅಶ್ವಿನ್

ಪಿಟಿಐ
Published 17 ಮಾರ್ಚ್ 2024, 0:26 IST
Last Updated 17 ಮಾರ್ಚ್ 2024, 0:26 IST
ಆರ್. ಅಶ್ವಿನ್ 
ಆರ್. ಅಶ್ವಿನ್    

ಚೆನ್ನೈ: ತಮ್ಮ ಜೀವನದುದ್ದಕ್ಕೂ ಮಹೇಂದ್ರಸಿಂಗ್ ಧೋನಿ ಅವರಿಗೆ ಋಣಿಯಾಗಿರುವುದಾಗಿ ಭಾರತ ತಂಡದ ಆಫ್‌ಸ್ಪಿನ್ನರ್ ಆರ್. ಅಶ್ವಿನ್ ಹೇಳಿದ್ಧಾರೆ. 

ತಮಿಳುನಾಡು ಕ್ರಿಕೆಟ್ ಸಂಸ್ಥೆ (ಟಿಎನ್‌ಸಿಎ) ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಹಾಗೂ ₹ 1 ಕೋಟಿ ಬಹುಮಾನ ಸ್ವೀಕರಿಸಿದ  ಅಶ್ವಿನ್ ಮಾತನಾಡಿದರು.  

‘ಅವತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಎದುರಿನ ಪಂದ್ಯದಲ್ಲಿ  ಕ್ರಿಸ್‌ ಗೇಲ್ ಎದುರು ಬೌಲಿಂಗ್ ಮಾಡಲು ಹೊಸ ಚೆಂಡು ನೀಡಿದ ಧೋನಿ ವಿಶ್ವಾಸಕ್ಕೆ ಋಣಿ ನಾನು‘ ಎಂದರು. 

ADVERTISEMENT

‘2008ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸೇರ್ಪಡೆಯಾದಾಗ ಖ್ಯಾತನಾಮರಾದ ಮ್ಯಾಥ್ಯೂ ಹೇಡನ್ ಮತ್ತು ಧೋನಿ ಅವರನ್ನು ಭೇಟಿಯಾದೆ. ಆಗ ನಾನಿನ್ನೂ ಏನೂ ಆಗಿರಲಿಲ್ಲ’ ಎಂದರು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.