ಮುಂಬೈ: ಭಾರತ ಕ್ರಿಕೆಟ್ ತಂಡವು ಮಹೇಂದ್ರಸಿಂಗ್ ಧೋನಿ ಇಲ್ಲದೇ ಆಡುವುದನ್ನು ಕಲಿಯಬೇಕು. ಧೋನಿ ಇನ್ನೂ ದೀರ್ಘ ಕಾಲದವರೆಗೆ ತಂಡದಲ್ಲಿ ಆಡುವುದಿಲ್ಲ ಎನ್ನುವ ಸತ್ಯವನ್ನು ಉಳಿದವರು ಒಪ್ಪಿಕೊಳ್ಳಬೇಕು ಎಂದು ಹಿರಿಯ ಕ್ರಿಕೆಟಿಗ ಸೌರವ್ ಗಂಗೂಲಿ ಹೇಳಿದ್ದಾರೆ.
‘ಎಲ್ಲ ದಿಗ್ಗಜ ಆಟಗಾರರೂ ಒಂದಲ್ಲ ಒಂದು ದಿನ ತಮ್ಮ ಕ್ರೀಡೆಗೆ ವಿದಾಯ ಹೇಳಲೇಬೆಕು. ಫುಟ್ಬಾಲ್ನಲ್ಲಿ ಮರಡೋನಾ ಕ್ರಿಕೆಟ್ನಲ್ಲಿ ಸಚಿನ್ ತೆಂಡೂಲ್ಕರ್, ಲಾರಾ, ಬ್ರಾಡ್ಮನ್ ಮತ್ತಿತರರು ನಿವೃತ್ತರಾದರು. ಅದೇ ರೀತಿ ಪ್ರತಿಯೊಬ್ಬರೂ ವಿದಾಯ ಹೇಳಲೇಬೇಕಾಗುತ್ತದೆ. ಅವರ ಸ್ಥಾನ ತುಂಬಲು ಯುವಕರು ಸಿದ್ಧರಾಗಿರಬೇಕು‘ ಎಂದು ಗಂಗೂಲಿ ಅವರು ಇಂಡಿಯಾ ಟುಡೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
‘ಇನ್ನೂ ಎಷ್ಟು ಕಾಲ ಆಡಬೇಕು ಎನ್ನುವುದನ್ನು ಧೋನಿಯವರೇ ನಿರ್ಧರಿಸಬೇಕು. ಮುಂದೇನು ಮಾಡಬೇಕು ಎಂಬುದನ್ನೂ ಅವರೇ ತೀರ್ಮಾನಿಸಬೇಕು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.