ಬೆಂಗಳೂರು: ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ (ಯುಎಇ) ಮಾರ್ಚ್ 13ರಿಂದ ನಡೆಯಲಿರುವ ತ್ರಿಕೋನ ಟಿ20 ಸರಣಿಗೆ ಭಾರತ ಅಂಧರ ಕ್ರಿಕೆಟ್ ತಂಡವನ್ನು ಸೋಮವಾರ ಪ್ರಕಟಿಸಲಾಯಿತು.
ಈ ಕುರಿತು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತ ಅಂಧರ ಕ್ರಿಕೆಟ್ ಸಂಸ್ಥೆ (ಸಿಎಬಿಎ) ಅಧ್ಯಕ್ಷ ಮಹಾಂತೇಶ್ ಜಿ. ಕಿವಡಸಣ್ಣವರ್ ತಂಡವನ್ನು ಪ್ರಕಟಿಸಿದರು.
ಯುಎಇಯ ಶಾರ್ಜಾದಲ್ಲಿ ಮಾರ್ಚ್ 19ರವರೆಗೆ ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾದೇಶ ತಂಡಗಳ ನಡುವೆ ತ್ರಿಕೋನ ಸರಣಿ ನಡೆಯಲಿದೆ. ಅದಕ್ಕೂ ಮೊದಲು ಮಾರ್ಚ್ 1ರಿಂದ 11ರವರೆಗೆ ಬೆಂಗಳೂರಿನಲ್ಲಿ ಭಾರತ ತಂಡದ ಶಿಬಿರ ನಡೆಯಲಿದೆ ಎಂದು ಮಹಾಂತೇಶ್ ಮಾಹಿತಿ ನೀಡಿದರು.
ಭಾರತ ತಂಡದಲ್ಲಿ ಕರ್ನಾಟಕದ ಪ್ರಕಾಶ್ ಜಯರಾಮಯ್ಯ, ಸುನಿಲ್ ರಮೇಶ್, ಬಸಪ್ಪ ವಡ್ಡಗೋಳ ಮತ್ತು ಲೋಕೇಶ್ ಸ್ಥಾನ ಗಳಿಸಿದ್ದಾರೆ.
ತಂಡ ಇಂತಿದೆ: ಕಲ್ಪೇಶ್ ನಿಂಬಾಡ್ಕರ್, ವೆಂಕಟೇಶ್ವರ ರಾವ್, ಸುಜಿತ್ ಮುಂಡಾ, ಬಸಪ್ಪ ವಡ್ಡಗೋಳ, ಪ್ರೇಮ್ ಕುಮಾರ್, ಪ್ರವೀಣ್ ಕುಮಾರ್ ಶರ್ಮಾ, ಡಿ.ವೆಂಕಟೇಶ್ವರ ರಾವ್, ಎ.ಮನೀಷ್, ಇರ್ಫಾನ್ ದೀವಾನ್, ನಕುಲ್ ಬದಾನಾಯಕ, ಲೋಕೇಶ್, ದೀಪಕ್ ಮಲಿಕ್, ಪ್ರಕಾಶ್ ಜಯರಾಮಯ್ಯ, ಸುನಿಲ್ ರಮೇಶ್, ದುರ್ಗಾ ರಾವ್, ಚಂದನ್ ಮತ್ತು ರಣಬೀರ್.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.