ADVERTISEMENT

IPL 2022: ಕಾರಿಗೆ ಸಿಂಗಾರ: ಆರ್‌ಸಿಬಿ ಪ್ರಚಾರ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2022, 19:45 IST
Last Updated 25 ಮಾರ್ಚ್ 2022, 19:45 IST
ಐಪಿಎಲ್ ಆರಂಭವಾಗುತ್ತಿರುವ ಹೊತ್ತಿಗೆ ತಮ್ಮ ಕಾರನ್ನೇ ಸಿಂಗರಿಸುವ ಮೂಲಕ ಶಿವಮೊಗ್ಗ ಜಿಲ್ಲೆ ಸಾಗರದ ಕ್ರಿಕೆಟ್ ಅಭಿಮಾನಿ ಸಂತೋಷ್ ಸದ್ಗುರು ಆರ್‌ಸಿಬಿ ತಂಡದ ಪರವಾಗಿ ಅಭಿಯಾನ ನಡೆಸಲು ಮುಂದಾಗಿದ್ದಾರೆ.
ಐಪಿಎಲ್ ಆರಂಭವಾಗುತ್ತಿರುವ ಹೊತ್ತಿಗೆ ತಮ್ಮ ಕಾರನ್ನೇ ಸಿಂಗರಿಸುವ ಮೂಲಕ ಶಿವಮೊಗ್ಗ ಜಿಲ್ಲೆ ಸಾಗರದ ಕ್ರಿಕೆಟ್ ಅಭಿಮಾನಿ ಸಂತೋಷ್ ಸದ್ಗುರು ಆರ್‌ಸಿಬಿ ತಂಡದ ಪರವಾಗಿ ಅಭಿಯಾನ ನಡೆಸಲು ಮುಂದಾಗಿದ್ದಾರೆ.   

ಸಾಗರ (ಶಿವಮೊಗ್ಗ ಜಿಲ್ಲೆ): ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಟೂರ್ನಿ ಆರಂಭವಾಗುತ್ತಿರುವ ಹೊತ್ತಿಗೆ ತನ್ನ ಕಾರನ್ನೇ ಸಿಂಗರಿಸುವ ಮೂಲಕ ಸಾಗರದ ಕ್ರಿಕೆಟ್ ಅಭಿಮಾನಿ ಸಂತೋಷ್ ಸದ್ಗುರು ಅವರು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡದ ಪರವಾಗಿ ಅಭಿಯಾನ ನಡೆಸಲು ಮುಂದಾಗಿದ್ದಾರೆ.

ಫಿಯೆಟ್ ಕಾರಿಗೆ ಬಣ್ಣ ಬಳಿಯುವ ಮೂಲಕ ಅದರ ಮೇಲೆ ಸಂತೋಷ್ ಅವರು ‘ಈ ಸಲ ಕಪ್ ನಮ್ದೆ’ ಎಂಬ ಘೋಷಣೆ ಬರೆಸಿದ್ದಾರೆ. ಅಲ್ಲದೇ ಕನ್ನಡ ಚಿತ್ರರಂಗದ ಖ್ಯಾತ ನಟರಾದ ಡಾ.ರಾಜ್ ಕುಮಾರ್, ವಿಷ್ಣುವರ್ಧನ್, ಶಂಕರ್‌ನಾಗ್, ಪುನೀತ್ ರಾಜ್‌ಕು ಮಾರ್ ಅವರ ಭಾವಚಿತ್ರಗಳನ್ನೂ ಕಾರಿನ ಮೇಲೆ ಚಿತ್ರಿಸುವ ಮೂಲಕ ಆರ್‌ಸಿಬಿ ತಂಡಕ್ಕೆ ಶುಭ ಕೋರಿದ್ದಾರೆ. ಈ ರೀತಿ ವರ್ಣರಂಜಿತವಾಗಿರುವ ಈ ಕಾರು ನಗರದ ವಿವಿಧೆಡೆ ಸಂಚರಿಸುತ್ತಿದ್ದು, ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT