ADVERTISEMENT

IPL 2021: ಪಡಿಕ್ಕಲ್ ಪರ ನಾಟೌಟ್ ತೀರ್ಪು; ಅಂಪೈರ್ ವಿರುದ್ಧ ರಾಹುಲ್ ಗರಂ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಅಕ್ಟೋಬರ್ 2021, 12:08 IST
Last Updated 3 ಅಕ್ಟೋಬರ್ 2021, 12:08 IST
ವಿವಾದಾತ್ಮಕ ತೀರ್ಪು (ಟ್ವಿಟರ್ ಸ್ಕ್ರೀನ್‌ಶಾಟ್)
ವಿವಾದಾತ್ಮಕ ತೀರ್ಪು (ಟ್ವಿಟರ್ ಸ್ಕ್ರೀನ್‌ಶಾಟ್)   

ಶಾರ್ಜಾ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಭಾನುವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ನಡೆಯುತ್ತಿರುವ ಪಂದ್ಯದ ವೇಳೆ ಪಂಜಾಬ್ ಕಿಂಗ್ಸ್ ತಂಡದ ನಾಯಕ ಕೆ.ಎಲ್. ರಾಹುಲ್, ಅಂಪೈರ್ ವಿರುದ್ಧ ಅಸಮಾಧಾನವನ್ನು ತೋಡಿಕೊಂಡಿದ್ದಾರೆ.

ಪಂದ್ಯದ ಎಂಟನೇ ಓವರ್‌ನಲ್ಲಿ ಘಟನೆ ನಡೆದಿತ್ತು. ಸ್ಪಿನ್ನರ್ ರವಿ ಬಿಷ್ಣೋಯಿ ಅವರ ಎಸೆತದಲ್ಲಿ ದೇವದತ್ತ ಪಡಿಕ್ಕಲ್ ರಿವರ್ಸ್ ಸ್ವೀಪ್ ಮಾಡಲು ಯತ್ನಿಸಿದ್ದರು. ಈ ಸಂದರ್ಭದಲ್ಲಿ ಚೆಂಡು ವಿಕೆಟ್ ಕೀಪರ್ ರಾಹುಲ್ ಕೈಯೊಳಗೆ ಭದ್ರವಾಗಿ ಸೇರಿತ್ತು.

ಪಂಜಾಬ್ ಮನವಿಯನ್ನು ಅಂಪೈರ್ ಪುರಸ್ಕರಿಸಲಿಲ್ಲ. ಪರಿಣಾಮ ಡಿಆರ್‌ಎಸ್ ಮೊರೆ ಹೋಗಲು ರಾಹುಲ್ ನಿರ್ಧರಿಸಿದರು. ಆದರೆ ಮೂರನೇ ಅಂಪೈರ್ ನಾಟೌಟ್ ತೀರ್ಪು ನೀಡಿರುವುದು ರಾಹುಲ್ ಕೋಪಕ್ಕೆ ಕಾರಣವಾಗಿದೆ.

ADVERTISEMENT

ರಿಪ್ಲೇ ಪರಿಶೀಲಿಸಿದಾಗ ಚೆಂಡು ಪಡಿಕ್ಕಲ್ ಗ್ಲೋವ್ ಸವರಿದಂತೆ ಭಾಸವಾಗುತ್ತಿತ್ತು. ಅಷ್ಟಾದರೂ ಥರ್ಡ್ ಅಂಪೈರ್ ನಾಟೌಟ್ ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ ಫೀಲ್ಡ್ ಅಂಪೈರ್‌ನಿಂದ ರಾಹುಲ್ ಸ್ಪಷ್ಪನೆಯನ್ನು ಬಯಸಿದರು.

ಇನ್ನೊಂದೆಡೆ ನಾನ್ ಸ್ಟ್ರೈಕರ್‌ನಲ್ಲಿದ್ದ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಇವೆಲ್ಲವನ್ನು ವೀಕ್ಷಿಸುತ್ತಿದ್ದರು. ಆದರೆ ಪ್ರತಿಕ್ರಿಯಿಸಲು ಮುಂದಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.