ADVERTISEMENT

ದಾಂಪತ್ಯ ಜೀವನಕ್ಕೆ ಗೌತಮ್

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2019, 18:30 IST
Last Updated 6 ಡಿಸೆಂಬರ್ 2019, 18:30 IST
ಅರ್ಚನಾ ಸುಂದರ್ ಮತ್ತು ಕೃಷ್ಣಪ್ಪ ಗೌತಮ್
ಅರ್ಚನಾ ಸುಂದರ್ ಮತ್ತು ಕೃಷ್ಣಪ್ಪ ಗೌತಮ್   

ಬೆಂಗಳೂರು: ಕರ್ನಾಟಕ ಕ್ರಿಕೆಟ್ ತಂಡದ ಆಫ್‌ಸ್ಪಿನ್ನರ್ ಕೃಷ್ಣಪ್ಪ ಗೌತಮ್ ಅವರು ಶುಕ್ರವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಅವರು ತಮ್ಮ ಬಹುಕಾಲದ ಗೆಳತಿ ಅರ್ಚನಾ ಸುಂದರ್ ಅವರನ್ನು ಮದುವೆಯಾದರು. ಧಣಿಸಂದ್ರದಲ್ಲಿರುವ ಕಲ್ಯಾಣ ಮಂಟಪದಲ್ಲಿ ಮದುವೆ ಸಮಾರಂಭ ನಡೆಯಿತು.

ಉಭಯ ಕುಟುಂಬಗಳ ಸದಸ್ಯರು, ಕೆಎಸ್‌ಸಿಎ ಪದಾಧಿಕಾರಿಗಳು ಮತ್ತು ಕರ್ನಾಟಕ ತಂಡದ ಆಟಗಾರರು ಈ ಸಂದರ್ಭದಲ್ಲಿ ಗೌತಮ್ ದಂಪತಿಗೆ ಶುಭ ಹಾರೈಸಿದರು.

ಹೋದ ಭಾನುವಾರ ನಡೆದಿದ್ದ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿ ಯ ಫೈನಲ್‌ನಲ್ಲಿ ಕೊನೆಯ ಓವರ್‌ನಲ್ಲಿ ಉತ್ತಮ ಬೌಲಿಂಗ್ ಮಾಡಿದ್ದ ಗೌತಮ್ ಕರ್ನಾಟಕ ತಂಡದ ಗೆಲುವಿಗೆ ಮುಖ್ಯ ಕಾರಣರಾಗಿದ್ದರು. ಡಿಸೆಂಬರ್ 9ರಂದು ದಿಂಡಿಗಲ್‌ನಲ್ಲಿ ಆರಂಭವಾಗಲಿರುವ ರಣಜಿ ಟ್ರೋಫಿ ಟೂರ್ನಿಯ ಮೊದಲ ಪಂದ್ಯದಲ್ಲಿ ಅವರು ಆಡಲಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.