ಬೆಂಗಳೂರು: ‘ಮದುವೆ ರಜೆ’ ಮುಗಿಸಿರುವ ಕರುಣ್ ನಾಯರ್ ತಂಡಕ್ಕೆ ಮರಳಿದ್ದಾರೆ. ಇದೇ 27ರಿಂದ ದೆಹಲಿಯಲ್ಲಿ ರೈಲ್ವೆಸ್ ವಿರುದ್ಧ ನಡೆಯಲಿರುವ ರಣಜಿ ಪಂದ್ಯದಲ್ಲಿ ಅವರು ಕರ್ನಾಟಕ ತಂಡವನ್ನು ಮುನ್ನಡೆಸುವರು.
ಬುಧವಾರ ತಂಡವನ್ನು ಪ್ರಕಟಿಸಲಾಗಿದೆ. ಆಲ್ರೌಂಡರ್ ಕೃಷ್ಣಪ್ಪ ಗೌತಮ್ ಅವರಿಗೆ ಇದರಲ್ಲಿ ಸ್ಥಾನ ನೀಡಿಲ್ಲ.
‘ಗೌತಮ್ ಫಿಟ್ನೆಸ್ ಟೆಸ್ಟ್ ಶೀಘ್ರದಲ್ಲಿ ನಡೆಯಲಿದೆ. ಅವರು ಅದರಲ್ಲಿ ಫಿಟ್ ಎಂದು ಸಾಬೀತಾದರೆ ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗುವುದು. ಇಲ್ಲದಿದ್ದರೆ ಎಡಗೈ ಸ್ಪಿನ್ನರ್ ಜೆ. ಸುಚಿತ್ ಸ್ಥಾನ ಪಡೆಯುವರು’ ಎಂದು ಕೆಎಸ್ಸಿಎ ಕಾರ್ಯದರ್ಶಿ ಸಂತೋಷ್ ಮೆನನ್ ತಿಳಿಸಿದ್ದಾರೆ.
ತಂಡ: ಕರುಣ್ ನಾಯರ್ (ನಾಯಕ), ದೇವದತ್ತ ಪಡಿಕ್ಕಲ್, ಆರ್. ಸಮರ್ಥ್, ರೋಹನ್ ಕದಂ, ಪವನ್ ದೇಶಪಾಂಡೆ, ಶ್ರೇಯಸ್ ಗೋಪಾಲ್, ಶರತ್ ಶ್ರೀನಿವಾಸ್ (ವಿಕೆಟ್ಕೀಪರ್), ಬಿ.ಆರ್. ಶರತ್ (ವಿಕೆಟ್ಕೀಪರ್), ಅಭಿಮನ್ಯು ಮಿಥುನ್, ವಿ. ಕೌಶಿಕ್, ರೋನಿತ್ ಮೋರೆ, ಪ್ರತೀಕ್ ಜೈನ್, ಕೆ.ವಿ. ಸಿದ್ಧಾರ್ಥ್, ಪ್ರವೀಣ ದುಬೆ.
ಕೋಚ್: ಯರೇ ಕೆ ಗೌಡ, ಬೌಲಿಂಗ್ ಕೋಚ್: ಎಸ್.ಅರವಿಂದ್, ಫೀಲ್ಡಿಂಗ್ ಕೋಚ್: ಶಬರೀಶ್ ಪಿ ಮೋಹನ್, ಅನುತೋಷ್ ಪಾಲ್ (ಮ್ಯಾನೇಜರ್), ರಕ್ಷಿತ್ (ಸ್ಟ್ರೆಂಥ್–ಕಂಡಿಷನಿಂಗ್), ಜಾಬ ಪ್ರಭು (ಫಿಸಿಯೊ), ವಿನೋದ್ (ವಿಡಿಯೋ ವಿಶ್ಲೇಷಕ), ಎ. ರಮೇಶ್ ರಾವ್ (ಲಾಜಿಸ್ಟಿಕ್ ಮ್ಯಾನೇಜರ್), ಸಿ.ಎಂ. ಸೋಮ ಸುಂದರ್ (ಮಸಾಜ್ ತಜ್ಞ).
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.