ADVERTISEMENT

ಕಿವೀಸ್‌ ಎದುರಿನ ಸೆಮಿಫೈನಲ್‌ ಸೋಲು ಕಾಡುತ್ತಿದೆ: ರಾಹುಲ್‌

ಪಿಟಿಐ
Published 25 ಏಪ್ರಿಲ್ 2020, 19:56 IST
Last Updated 25 ಏಪ್ರಿಲ್ 2020, 19:56 IST
ಕೆ.ಎಲ್‌.ರಾಹುಲ್‌
ಕೆ.ಎಲ್‌.ರಾಹುಲ್‌   

ಮುಂಬೈ: ‘ಏಕದಿನ ವಿಶ್ವಕಪ್ ಕ್ರಿಕೆಟ್‌ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್‌ ಎದುರು ಅನುಭವಿಸಿದ ಸೋಲು ತಮ್ಮನ್ನು ಮತ್ತು ತಂಡದ ಸಹ ಆಟಗಾರರನ್ನು ಕಾಡುತ್ತಿದೆ’ ಎಂದು ಭಾರತದ ತಂಡದ ಯುವ ಆಟಗಾರ ಕೆ.ಎಲ್‌. ರಾಹುಲ್‌ ಹೇಳಿದ್ದಾರೆ.

ಇಂಗ್ಲೆಂಡ್‌ನಲ್ಲಿ ಕಳೆದ ವರ್ಷದ ಮಧ್ಯದಲ್ಲಿ ನಡೆದ ಈ ಟೂರ್ನಿಯ ಗುಂಪು ಹಂತದಲ್ಲಿ ಭಾರತ ಹೆಚ್ಚುಕಮ್ಮಿ ಪರಿಪೂರ್ಣ ಎನ್ನುವಂಥ ಪ್ರದರ್ಶನ ನೀಡಿತ್ತು.

‘ಹಿಂದೆ ನಡೆದ ಯಾವುದಾದರೊಂದು ಪಂದ್ಯದ ಫಲಿತಾಂಶ ಬದಲಾಯಿಸುವ ಅವಕಾಶ ತಮಗೆ ಒದಗಿ ಬಂದರೆ ಅದು 2019ರ ವಿಶ್ವಕಪ್‌ ಸೆಮಿಫೈನಲ್‌ ಎಂಬುದು ಖಡಾಖಂಡಿತ’ ಎಂದು ಅವರು ವಿಶೇಷ ಹರಟೆ ಕಾರ್ಯಕ್ರಮ ’ದಿ ಮೈಂಡ್‌ ಬಿಹೈಂಡ್‌’ನಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

‘ತಂಡದ ಬಹುತೇಕ ಆಟಗಾರರಿಗೆ ಸೋಲು ಅರಗಿಸಿಕೊಳ್ಳಲಾಗುತ್ತಿಲ್ಲ. ಈಗಲೂ ಕೆಲ ಸಂದರ್ಭಗಳಲ್ಲಿ ಅದು ನಮ್ಮನ್ನು ಕಾಡುತ್ತಿರುತ್ತದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.