ADVERTISEMENT

Maharaja Trophy | ಇಂದು ಫೈನಲ್: ಪ್ರಶಸ್ತಿಗಾಗಿ ಹುಬ್ಬಳ್ಳಿ, ಮಂಗಳೂರು ಸೆಣಸಾಟ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2025, 2:23 IST
Last Updated 28 ಆಗಸ್ಟ್ 2025, 2:23 IST
<div class="paragraphs"><p>ಹುಬ್ಬಳ್ಳಿ ಟೈಗರ್ಸ್ ನಾಯಕ ದೇವದತ್ತ ಪಡಿಕ್ಕಲ್‌ ಹಾಗೂ&nbsp;ಮಂಗಳೂರು ಡ್ರ್ಯಾಗನ್ಸ್‌ ನಾಯಕ ಶ್ರೇಯಸ್‌ ಗೋಪಾಲ್‌</p></div>

ಹುಬ್ಬಳ್ಳಿ ಟೈಗರ್ಸ್ ನಾಯಕ ದೇವದತ್ತ ಪಡಿಕ್ಕಲ್‌ ಹಾಗೂ ಮಂಗಳೂರು ಡ್ರ್ಯಾಗನ್ಸ್‌ ನಾಯಕ ಶ್ರೇಯಸ್‌ ಗೋಪಾಲ್‌

   

ಪ್ರಜಾವಾಣಿ ಚಿತ್ರ/ಅನೂಪ್ ರಾಘ.ಟಿ.

ಮೈಸೂರು: ಈ ಬಾರಿಯ ಮಹಾರಾಜ ಟ್ರೋಫಿ ಟಿ20 ಕ್ರಿಕೆಟ್‌ ಟೂರ್ನಿಯ ಫೈನಲ್‌ನಲ್ಲಿ ಹುಬ್ಬಳ್ಳಿ ಟೈಗರ್ಸ್ ಹಾಗೂ ಮಂಗಳೂರು ಡ್ರ್ಯಾಗನ್ಸ್‌ ತಂಡಗಳು ಪ್ರಶಸ್ತಿಗಾಗಿ ಸೆಣಸಾಟ ನಡೆಸಲಿವೆ.

ADVERTISEMENT

ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಕ್ರೀಡಾಂಗಣದಲ್ಲಿ ಗುರುವಾರ ಅಂತಿಮ ಹಣಾಹಣಿ ನಡೆಯಲಿದೆ. ಸಂಜೆ 6.30ಕ್ಕೆ ಪಂದ್ಯ ಆರಂಭವಾಗಲಿದೆ.

ಡ್ರ್ಯಾಗನ್ಸ್‌ ಹಾಗೂ ಟೈಗರ್ಸ್, ಗುಂಪು ಹಂತದಲ್ಲಿ ಆಡಿದ ಹತ್ತು ಪಂದ್ಯಗಳಲ್ಲಿ ತಲಾ ಏಳರಲ್ಲಿ ಜಯ ಸಾಧಿಸಿದ್ದವು. ಹೀಗಾಗಿ, ಪಾಯಿಂಟ್‌ ಪಟ್ಟಿಯಲ್ಲಿ ಕ್ರಮವಾಗಿ ಮೊದಲೆರಡು ಸ್ಥಾನಗಳಲ್ಲಿದ್ದವು.

ಈ ತಂಡಗಳ ನಡುವಣ ಮೊದಲ ಕ್ವಾಲಿಫೈಯರ್‌ ಮಂಗಳವಾರ (ಆ.26) ನಡೆದಿತ್ತು. ಬರೋಬ್ಬರಿ 110 ರನ್‌ ಅಂತರದಿಂದ ಜಯ ಸಾಧಿಸಿದ್ದ ಟೈಗರ್ಸ್, ಫೈನಲ್‌ ಟಿಕೆಟ್‌ ಗಿಟ್ಟಿಸಿಕೊಂಡಿತ್ತು.

ಇದರಿಂದಾಗಿ, ಡ್ರ್ಯಾಗನ್ಸ್‌ ಎರಡನೇ ಕ್ವಾಲಿಫೈಯರ್‌ನಲ್ಲಿ ಗೆದ್ದು ಫೈನಲ್‌ಗೇರಬೇಕಾಯಿತು. ಬುಧವಾರ ನಡೆದ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್‌ ಪಡೆಯನ್ನು 7 ವಿಕೆಟ್‌ಗಳಿಂದ ಸೋಲಿಸುವ ಮೂಲಕ ಮಹಾರಾಜ ಟ್ರೋಫಿ ಟೂರ್ನಿಗಳಲ್ಲಿ ಮೊದಲ ಬಾರಿಗೆ ಅಂತಿಮ ಸುತ್ತಿಗೆ ತಲುಪಿದೆ.

ಟೈಗರ್ಸ್, 2023ರಲ್ಲಿ ಮೊದಲ ಬಾರಿಗೆ ಟ್ರೋಫಿ ಎತ್ತಿ ಹಿಡಿದಿತ್ತು. ಆದರೆ, ಡ್ರ್ಯಾಗನ್ಸ್‌ ಮೊದಲ ಮೂರೂ ಆವೃತ್ತಿಗಳಲ್ಲಿ ಕ್ವಾಲಿಫೈಯರ್‌ ಸುತ್ತಿಗೂ ಬಂದಿರಲಿಲ್ಲ. ಮೊದಲೆರಡು ಆವೃತ್ತಿಗಳಲ್ಲಿ 5ನೇ ಸ್ಥಾನ ಹಾಗೂ ಕಳೆದ ವರ್ಷ 6ನೇ ಸ್ಥಾನದೊಂದಿಗೆ ಅಭಿಯಾನ ಮುಗಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.