ನವದೆಹಲಿ : ಮಹೇಂದ್ರಸಿಂಗ್ ಧೋನಿ ಅವರು ನಾಯಕರಾಗಿದ್ದಾಗ ತಂಡದ ಸೋಲಿನ ಹೊಣೆಯನ್ನು ಹೊತ್ತುಕೊಳ್ಳುತ್ತಿದ್ದರು ಎಂದು ಮಧ್ಯಮವೇಗದ ಬೌಲರ್ ಮೋಹಿತ್ ಶರ್ಮಾ ಹೇಳಿದ್ದಾರೆ.
‘ವಿನಯವಂತಿಕೆ ಮತ್ತು ಧನ್ಯತಾ ಗುಣಗಳಿಂದಾಗಿ ಧೋನಿ ಉಳಿದೆಲ್ಲ ಆಟಗಾರರಿಗಿಂತ ವಿಭಿನ್ನ ವ್ಯಕ್ತಿಯಾಗಿ ನಿಲ್ಲುತ್ತಾರೆ. ಅವರು ನಿಜಕ್ಕೂ ನಾಯಕ. ಎಲ್ಲರ ಮೇಲೆ ವಿಶ್ವಾಸವಿಟ್ಟು ಮುನ್ನಡೆಸುವ ಕಲೆ ಅವರಿಗೆ ಸಿದ್ಧಿಸಿದೆ’ ಎಂದು ಶರ್ಮಾ ಡೆಲ್ಲಿ ಕ್ಯಾಪಿಟಲ್ ಫ್ರ್ಯಾಂಚೈಸ್ ನ ಇನ್ಸ್ಟಾಗ್ರಾಮ್ ಲೈವ್ನಲ್ಲಿ ಹೇಳಿದ್ದಾರೆ.
ಶರ್ಮಾ ಅವರು ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಆಡಿದ್ದರು.
‘ತಂಡವು ಗೆದ್ದಾಗ ಅವರು ಹಿಂದೆ ಉಳಿದಿರುತ್ತಾರೆ. ಬಹಳಷ್ಟು ಜನರ ಕಣ್ಣಿಗೆ ಬೀಳುವುದಿಲ್ಲ. ಆದರೆ ತಂಡ ಸೋತಾಗ ಎಲ್ಲರಿಗಿಂತ ಮುಂದೆ ಅವರಿರುತ್ತಿದ್ದರು. ಸೋಲಿನ ಉತ್ತರದಾಯಿತ್ವವನ್ನು ತಾವೇ ತೆಗೆದುಕೊಳ್ಳುತ್ತಿದ್ದರು. ಅದು ಉತ್ತಮ ನಾಯಕತ್ವದ ಗುಣ’ ಎಂದು ಶ್ಲಾಘಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.