ADVERTISEMENT

ತಪ್ಪುಗಳ ಬಗ್ಗೆ ಕ್ಯಾಪಿಟಲ್ಸ್‌ ಚಿಂತೆ ಮಾಡುವುದಿಲ್ಲ: ರಬಾಡ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2019, 19:23 IST
Last Updated 24 ಏಪ್ರಿಲ್ 2019, 19:23 IST
ಕಗಿಸೊ ರಬಾಡ
ಕಗಿಸೊ ರಬಾಡ   

ನವದೆಹಲಿ (ಪಿಟಿಐ): ದೌರ್ಬಲ್ಯಗಳು ಮತ್ತು ತಪ್ಪುಗಳ ಬಗ್ಗೆ ತಲೆಕೆಡಿಸಿಕೊಳ್ಳದೆ ಮುನ್ನುಗ್ಗುವ ಗುಣದಿಂದಾಗಿ ಡೆಲ್ಲಿ ಕ್ಯಾಪಿಟಲ್ಸ್‌ಗೆ ತುಂಬ ಅನುಕೂಲವಾಗಿದೆ ಎಂದು ಮಧ್ಯಮ ವೇಗಿ ಕಗಿಸೊ ರಬಾಡ ಅಭಿಪ್ರಾಯಪಟ್ಟರು.

ರಾಜಸ್ಥಾನ್ ರಾಯಲ್ಸ್ ಎದುರಿನ ಪಂದ್ಯದಲ್ಲಿ ಆರು ವಿಕೆಟ್‌ಗಳಿಂದ ಗೆದ್ದ ಕ್ಯಾಪಿಟಲ್ಸ್ ಮುಂದಿನ ಪಂದ್ಯದಲ್ಲಿ ಇದೇ 28ರಂದು ಆರ್‌ಸಿಬಿಯನ್ನು ಎದುರಿಸಲಿದೆ. ಇದಕ್ಕೆ ಐದು ದಿನಗಳ ಬಿಡುವು ಇದೆ. ಈ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಬಾಡ ‘ತಂಡ ಈಗ ಪೂರ್ಣ ಭರವಸೆಯಲ್ಲಿದೆ. ತಪ್ಪುಗಳನ್ನು ಮರೆತು ಸಕಾರಾತ್ಮಕವಾಗಿ ಮುಂದೆ ಹೆಜ್ಜೆ ಇರಿಸುವುದು ನಮ್ಮ ಉದ್ದೇಶ’ ಎಂದರು.

ಖುಷಿಯಲ್ಲಿ ಪೃಥ್ವಿ ಶಾ: ತಂಡದ ಅಗತ್ಯಕ್ಕೆ ತಕ್ಕಂತೆ ಆಡಲು ಸಾಧ್ಯವಾಗುತ್ತಿರುವುದರಲ್ಲಿ ಖುಷಿ ಇದೆ ಎಂದು ಯುವ ಬ್ಯಾಟ್ಸ್‌ಮನ್ ಪೃಥ್ವಿ ಶಾ ಹೇಳಿದರು.

ADVERTISEMENT

‘ಪ್ರತಿಯೊಬ್ಬರೂ ಪ್ರತಿ ಪಂದ್ಯದಲ್ಲಿ ಉತ್ತಮ ರೀತಿಯಲ್ಲಿ ಆಡಲು ಪ್ರಯತ್ನಿಸುತ್ತಾರೆ. ಎಲ್ಲ ಸಂದರ್ಭದಲ್ಲಿ ಇದು ಸಾಕಾರ ಆಗುವುದಿಲ್ಲ. ನಿರ್ದಿಷ್ಟ ಪಂದ್ಯದಲ್ಲಿ ಉತ್ತಮ ಸಾಮರ್ಥ್ಯ ತೋರಲು ಆಗಲಿಲ್ಲ ಎಂದು ಬೇಸರಪಟ್ಟುಕೊಂಡು ಕೂರುವ ಜಾಯಮಾನ ನನ್ನದಲ್ಲ. ಮುಂದಿನ ಪಂದ್ಯದಲ್ಲಿ ಮತ್ತಷ್ಟು ಉತ್ತಮ ರೀತಿಯಲ್ಲಿ ಆಡುವುದರ ಕಡೆಗೆ ನಾನು ಗಮನ ನೀಡುತ್ತೇನೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.