ADVERTISEMENT

ರಣಜಿ: ಹಿಮಾಚಲ ಪ್ರದೇಶದ ಎದುರು ಕರ್ನಾಟಕಕ್ಕೆ ಆರಂಭಿಕ ಆಘಾತ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2019, 7:19 IST
Last Updated 25 ಡಿಸೆಂಬರ್ 2019, 7:19 IST
   

ಮೈಸೂರು: ಕರ್ನಾಟಕ ತಂಡ ಇಲ್ಲಿನ ಗಂಗೋತ್ರಿ ಗ್ಲೇಡ್ಸ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಹಿಮಾಚಲ ಪ್ರದೇಶ ವಿರುದ್ಧದ ರಣಜಿ ಟ್ರೋಫಿ ಕ್ರಿಕೆಟ್‌ ಪಂದ್ಯದಲ್ಲಿ ಆರಂಭಿಕ ಆಘಾತ ಅನುಭವಿಸಿದೆ.

ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಕರ್ನಾಟಕ ಮೊದಲ ದಿನದಾಟದ ಭೋಜನ ವಿರಾಮದ ವೇಳೆಗೆ 6 ವಿಕೆಟ್‌ ನಷ್ಟಕ್ಕೆ 89 ರನ್‌ ಗಳಿಸಿದೆ.

ಮಯಂಕ್‌ ಅಗರವಾಲ್ (0), ದೇವದತ್ತ ಪಡಿಕ್ಕಲ್ (0) ಮತ್ತು ಆರ್‌.ಸಮರ್ಥ್‌ (4) ಅವರನ್ನು ಬೇಗನೇ ಕಳೆದುಕೊಂಡ ತಂಡ ಆಘಾತಕ್ಕೆ ಒಳಗಾಯಿತು. ಡಿ.ನಿಶ್ಚಲ್ (16) ಮತ್ತು ಶ್ರೇಯಸ್‌ ಗೋಪಾಲ್ (27) ಉತ್ತಮ ಆರಂಭ ಪಡೆದರೂ ಅದನ್ನು ದೊಡ್ಡ ಮೊತ್ತವಾಗಿ ಪರಿವರ್ತಿಸುವಲ್ಲಿ ವಿಫಲರಾದರು.

ADVERTISEMENT

ಭೋಜನ ವಿರಾಮಕ್ಕೆ ಅಲ್ಪ ಮುನ್ನ ಬಿ.ಆರ್‌.ಶರತ್‌ (2) ಕೂಡಾ ಔಟಾದರು. 21 ರನ್‌ಗಳಿಗೆ ನಾಲ್ಕು ವಿಕೆಟ್‌ ಪಡೆದ ಕೆ.ಡಿ.ಸಿಂಗ್ ಕರ್ನಾಟಕದ ಬ್ಯಾಟಿಂಗ್‌ನ ಬೆನ್ನೆಲುಬು ಮುರಿದರು. ನಾಯಕ ಕರುಣ್‌ ನಾಯರ್‌ 40 ರನ್‌ಗಳೊಂದಿಗೆ ಆಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.