ಸೂರತ್ : ಶ್ರೀಲಂಕಾ ಎದುರಿನ ಟಿ20 ಸರಣಿಯಲ್ಲಿ ಭಾರತ ತಂಡಕ್ಕೆ ಮರಳಲು ಸಿದ್ಧರಾಗಿರುವ ಮಧ್ಯಮವೇಗಿ ಜಸ್ಪ್ರೀತ್ ಬೂಮ್ರಾ ಅವರು ರಣಜಿ ಟ್ರೋಫಿ ಟೂರ್ನಿಯಲ್ಲಿ ತಮ್ಮ ಸಾಮರ್ಥ್ಯವನ್ನು ಪರೀಕ್ಷೆಗೊಡ್ಡಲಿದ್ದಾರೆ.
ಬುಧವಾರದಿಂದ ಸೂರತ್ನಲ್ಲಿ ಆರಂಭವಾಗಲಿರುವ ಕೇರಳ ವಿರುದ್ಧದ ರಣಜಿ ಪಂದ್ಯದಲ್ಲಿ ಅವರು ಗುಜರಾತ್ ಪರವಾಗಿ ಕಣಕ್ಕಿಳಿಯಲಿದ್ದಾರೆ.
ಹೋದ ಸೆಪ್ಟೆಂಬರ್ ನಲ್ಲಿ ಮೂಳೆಮುರಿತದಿಂದ ಅವರು ಕ್ರಿಕೆಟ್ನಿಂದ ದೂರ ಉಳಿದಿದ್ದರು. 26 ವರ್ಷದ ಬೂಮ್ರಾ ಅವರು ಈಗ ಗಾಯದಿಂದ ಚೇತರಿಸಿಕೊಂಡಿದ್ದು, ಶ್ರೀಲಂಕಾ ಎದುರಿನ ಟಿ20 ಮತ್ತು ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಆಡುವ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ.
26 ವರ್ಷದ ಬೂಮ್ರಾ ಅವರು ಕಣಕ್ಕಿಳಿಯಲಿರುವ ರಣಜಿ ತಂಡದ ವೀಕ್ಷಣೆಗೆ ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್.ಕೆ ಪ್ರಸಾದ್ ಹಾಜರಿರುವರು. ಕೇರಳದ ಬ್ಯಾಟ್ಸ್ಮನ್ ಸಂಜು ಸ್ಯಾಮ್ಸನ್ ಕೂಡ ಇಲ್ಲಿ ಆಡಲಿದ್ದಾರೆ.
‘ಡೆತ್ ಓವರ್’ ಪರಿಣತ ಎಂದೇ ಖ್ಯಾತರಾಗಿರುವ ಬೂಮ್ರಾ 12 ಟೆಸ್ಟ್ಗಳನ್ನು ಆಡಿ 62 ವಿಕೆಟ್ ಗಳಿಸಿದ್ದಾರೆ. ಏಕದಿನ ಕ್ರಿಕೆಟ್ನಲ್ಲಿ 103 ಮತ್ತು ಟಿ20ಯಲ್ಲಿ 51 ವಿಕೆಟ್ಗಳನ್ನು ಗಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.