ನವದೆಹಲಿ: ಬಾಂಗ್ಲಾ ವಿರುದ್ಧ ಸೋಲಿಗೆ ತಲೆಕಡಿಸಿಕೊಳ್ಳದ ಭಾರತದ ಕ್ರಿಕೆಟ್ ಅಭಿಮಾನಿಗಳುವಿಕೆಟ್ ಕೀಪರ್ ರಿಷಭ್ ಪಂತ್ ಅವರನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್ ಮಾಡಿದ್ದಾರೆ.
ಮೊದಲ ಟ್ವೆಂಟಿ–20 ಅಂತರರಾಷ್ಟ್ರೀಯ ಪಂದ್ಯದಲ್ಲಿ ಬಾಂಗ್ಲಾದೇಶ ತಂಡ ಮೂರು ಎಸೆತಗಳು ಉಳಿದಿರುವಂತೆ ಏಳು ವಿಕೆಟ್ಗಳಿಂದ ಭಾರತದ ಎದುರು ಜಯಗಳಿಸಿತು. ಈ ವೇಳೆ ಮಹೇಂದ್ರ ಸಿಂಗ್ ದೋನಿಯ ಅನುಪಸ್ಥಿತಿ ಕ್ರಿಕೆಟ್ ಪ್ರಿಯರಿಗೆ ಕಾಡಿದ್ದು ಸುಳ್ಳಲ್ಲ. ದೋನಿ ಜಾಗದಲ್ಲಿ ರಿಷಭ್ ಪಂತ್ ಅವರನ್ನು ನೋಡಿದ ಅಭಿಮಾನಿಗಳು ಭಾರತ ತಂಡ ಸೋಲು ಕಂಡಾಗ ನಿರಾಶೆಗೊಂಡರು.
ರಿಷಭ್ ಪಂತ್ ಎಡವಟ್ಟಿನಿಂದ ಭಾರತ ತಂಡ ಸೋಲು ಅನುಭವಿಸಿತು. ವಿಕೆಟ್ ಹಿಂದೆ ನಿಂತಾಗ ಚುರುಕಾಗಿರಬೇಕು ಎಂಬುದಕ್ಕೆ ದೋನಿಯನ್ನು ನೋಡಿ ಪಂತ್ ಕಲಿಯಬೇಕು ಎಂದು ಹೇಳಿದ್ದಾರೆ. ಒಂದೇ ಓವರ್ನಲ್ಲಿ ಮೂರು ಪ್ರಮಾದಗಳನ್ನು ಎಸಗಿ ತಂಡದ ಸೋಲಿಗೆ ಪಂತ್ಕಾರಣರಾದರೂಎಂದುಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
ಯಜುವೇಂದ್ರ ಚಹಲ್ ಅವರ ಓವರ್ನಲ್ಲಿ ಎರಡು ಬಾರಿ ಎಲ್ಬಿಡಬ್ಲ್ಯುಗಾಗಿ ಡಿಆರ್ಎಸ್ ಮನವಿ ಪಡೆಯುವ ಅವಕಾಶವಿದ್ದರೂರಿಷಭ್ ಪಂತ್ ಅದನ್ನು ಪಡೆಯಲಿಲ್ಲ. ಪಂತ್ ಎಡವಟ್ಟಿನಿಂದ ಅದೇ ಓವರ್ನ ಅಂತಿಮ ಎಸೆತದಲ್ಲಿ ಬಾಲ್ ಬ್ಯಾಟಿಗೆ ತಾಗದಿದ್ದರೂ ಮನವಿ ಮಾಡುವ ಮೂಲಕ ಮಹತ್ವದ ಡಿಆರ್ಎಸ್ ಕಳೆದುಕೊಂಡಿತು. ದೋನಿ ಅವರಸಾನಿಧ್ಯ ಎಷ್ಟು ಅಗತ್ಯವಿದೆ ಎಂಬುದು ಇದರಿಂದಲೇ ತಿಳಿದು ಬರುತ್ತಿದೆ ಎಂದುಕ್ರಿಕೆಟ್ ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಬರೆಯುದರ ಜತೆಗೆ ಪಂತ್ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ.
ಕೆಲವು ಟ್ರೋಲ್ಗಳು ಈ ರೀತಿ ಇವೆ...
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.