ADVERTISEMENT

ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿ: ಕ್ವಾರ್ಟರ್‌ಫೈನಲ್ ಪ್ರವೇಶಿಸಿದ ಕರ್ನಾಟಕ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ನವೆಂಬರ್ 2022, 15:49 IST
Last Updated 26 ನವೆಂಬರ್ 2022, 15:49 IST
ಕರ್ನಾಟಕ ತಂಡದ ಮನೀಷ್ ಪಾಂಡೆ, ವಿ. ಕೌಶಿಕ್ ಹಾಗೂ ಮಯಂಕ್ ಅಗರವಾಲ್
ಕರ್ನಾಟಕ ತಂಡದ ಮನೀಷ್ ಪಾಂಡೆ, ವಿ. ಕೌಶಿಕ್ ಹಾಗೂ ಮಯಂಕ್ ಅಗರವಾಲ್    

ಅಹಮದಾಬಾದ್‌: ಜಾರ್ಖಂಡ್‌ ವಿರುದ್ಧ 5 ವಿಕೆಟ್ ಅಂತರದ ಸುಲಭ ಗೆಲುವು ಸಾಧಿಸಿದ ಕರ್ನಾಟಕ ತಂಡ ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಕ್ವಾರ್ಟರ್‌ಫೈನಲ್‌ ಪ್ರವೇಶಿಸಿದೆ.

ಇಲ್ಲಿನನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪ್ರೀಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಜಾರ್ಖಂಡ್‌ 47.1 ಓವರ್‌ಗಳಲ್ಲೇ 187 ರನ್‌ ಗಳಿಸಿ ಆಲೌಟ್‌ ಆಯಿತು.

ಶಿಸ್ತಿನ ದಾಳಿ ಸಂಘಟಿಸಿದವೇಗಿಗಳಾದ ವಿದ್ವತ್ ಕಾವೇರಪ್ಪ, ರೋನಿತ್ ಮೋರೆ ಹಾಗೂ ಎಂ. ವೆಂಕಟೇಶ್ ತಲಾ ಮೂರು ವಿಕೆಟ್‌ಗಳನ್ನು ಉರುಳಿಸಿದರು. ಮನೋಜ್‌ ಭಾಂದಗೆ ಇನ್ನೊಂದು ವಿಕೆಟ್‌ ಪಡೆದರು. ಹೀಗಾಗಿ, ಜಾರ್ಖಂಡ್ ಪಡೆಯನ್ನು ಸಾಧಾರಣ ಮೊತ್ತಕ್ಕೆ ಕಟ್ಟಿ ಹಾಕಲು ಸಾಧ್ಯವಾಯಿತು.

ADVERTISEMENT

ಈ ಗುರಿ ಬೆನ್ನತ್ತಿದ ಕರ್ನಾಟಕ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಆರ್‌.ಸಮರ್ಥ್‌ ಜೊತೆ ಇನಿಂಗ್ಸ್‌ ಆರಂಭಿಸಿದ ನಾಯಕ ಮಯಂಕ್ ಅಗರವಾಲ್‌ ಕೇವಲ 12 ರನ್ ಗಳಿಸಿ ಔಟಾದರು. ಆದರೆ, ಸಮರ್ಥ್‌ (53) ಮತ್ತು ಮೂರನೇ ಕ್ರಮಾಂಕದ ನಿಕಿನ್‌ ಜೋಶ್ (63) ತಲಾ ಅರ್ಧಶತಕ ಸಿಡಿಸಿ ಮಿಂಚಿದರು. ಹೀಗಾಗಿ ಇನ್ನೂ 55 ಎಸೆತಗಳು ಬಾಕಿ ಇರುವಂತೆಯೇ 5 ವಿಕೆಟ್‌ ನಷ್ಟಕ್ಕೆ 188 ರನ್ ಗಳಿಸಿ ಜಯದ ನಗೆ ಬೀರಿತು.

ಕರ್ನಾಟಕ ತಂಡನವೆಂಬರ್‌ 28ರಂದು ನಡೆಯುವಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಪಂಜಾಬ್‌ ವಿರುದ್ಧ ಕಣಕ್ಕಿಳಿಯಲಿದೆ.

ಅದೇ ದಿನಮಹಾರಾಷ್ಟ್ರ ವಿರುದ್ಧ ಉತ್ತರ ಪ್ರದೇಶ, ಅಸ್ಸಾಂ ವಿರುದ್ಧ ಜಮ್ಮು ಮತ್ತು ಕಾಶ್ಮೀರ, ತಮಿಳುನಾಡು ವಿರುದ್ಧ ಸೌರಾಷ್ಟ್ರ ಸೆಮಿಫೈನಲ್‌ ಟಿಕೆಟ್‌ಗಾಗಿ ಪೈಪೋಟಿ ನಡೆಸಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.