ADVERTISEMENT

ಕರ್ನಾಟಕ ಹಾಗೂ ಭಾರತಕ್ಕೆ ವಿನಯ್ ಕೊಡುಗೆ ಶ್ಲಾಘನೀಯ: ಅನಿಲ್ ಕುಂಬ್ಳೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಫೆಬ್ರುವರಿ 2021, 11:07 IST
Last Updated 26 ಫೆಬ್ರುವರಿ 2021, 11:07 IST
ವಿನಯ್ ಕುಮಾರ್
ವಿನಯ್ ಕುಮಾರ್   

ಬೆಂಗಳೂರು: ಅಂತರ ರಾಷ್ಟ್ರೀಯ ಹಾಗೂ ಪ್ರಥಮ ದರ್ಜೆ ಕ್ರಿಕೆಟ್‌ಗೆ ನಿವೃತ್ತಿ ಸಲ್ಲಿಸಿರುವ ಭಾರತೀಯ ಕ್ರಿಕೆಟಿಗ ಹಾಗೂ ಕರ್ನಾಟಕದ ಮಾಜಿ ನಾಯಕ ಆರ್. ವಿನಯ್ ಕುಮಾರ್ ಅವರಿಗೆ ಭಾರತೀಯ ಕ್ರಿಕೆಟ್ ದಿಗ್ಗಜರು ಶುಭ ಹಾರೈಸಿದ್ದಾರೆ.

ಇವರಲ್ಲಿ ಭಾರತದ ಮಾಜಿ ಲೆಗ್ ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆ ಮೊದಲಿಗರಾಗಿ ಗುರುತಿಸಿಕೊಂಡಿದ್ದು, ವಿನಯ್ ಸಾಧನೆಯನ್ನು ವಿಶೇಷವಾಗಿ ಉಲ್ಲೇಖಿಸಿದ್ದಾರೆ.

ನಿಮ್ಮ ಅದ್ಭುತ ಕೆರಿಯರ್‌ಗಾಗಿ ವೆಲ್ ಡನ್ ವಿನಯ್. ಕರ್ನಾಟಕ ಕ್ರಿಕೆಟ್ ಹಾಗೂ ಭಾರತಕ್ಕೆ ನಿಮ್ಮ ಕೊಡುಗೆ ಶ್ಲಾಘನೀಯ. ಅಭಿನಂದನೆಗಳು, ಹೆಮ್ಮೆಯಿಂದಲೇ ಹಿಂತಿರುಗಿ ನೋಡಬಹುದು. ಉತ್ತಮ ಭವಿಷ್ಯಕ್ಕೂ ಶುಭ ಕಾಮನೆಗಳು ಎಂದು ಅನಿಲ್ ಕುಂಬ್ಳೆ ಟ್ವೀಟ್ ಮಾಡಿದ್ದಾರೆ.

ವಿನಯ್ ನಾಯಕತ್ವದಡಿಯಲ್ಲಿ ಆಡಿರುವ ಸಹ ಆಟಗಾರ ಮಯಂಕ್ ಅಗರವಾಲ್ ಸಹ ಅದ್ಭುತ ಕೆರಿಯರ್‌ಗಾಗಿ ಅಭಿನಂದನೆಗಳನ್ನು ಸಲ್ಲಿಸಿದರು. ಅನೇಕ ಆಟಗಾರರಿಗೆ ಸ್ಫೂರ್ತಿಯಾಗಿರುವ ವಿನಯ್ ಅದ್ಭುತ ನೆನಪುಗಳನ್ನು ಸೃಷ್ಟಿಸಿದ್ದಾರೆ. ಶುಭ ಹಾರೈಕೆಗಳು ಎಂದು ತಿಳಿಸಿದ್ದಾರೆ.

ಸ್ನೇಹಿತನ ವೃತ್ತಿ ಜೀವನಕ್ಕೆ ಶಾಭಾಸ್ ಎಂದು ಇರ್ಫಾನ್ ಪಠಾಣ್ ಹೇಳಿದ್ದಾರೆ. ಅಲ್ಲದೆ ಉತ್ತಮ ಭವಿಷ್ಯಕ್ಕಾಗಿ ಶುಭ ಹಾರೈಸಿದ್ದಾರೆ.

ವಿನಯ್ ಕುಮಾರ್ ಅವರನ್ನು ಸಹೋದರ ಎಂದು ಸಂಭೋಧಿಸಿರುವ ಸುರೇಶ್ ರೈನಾ ಅಭನಂದನೆಗಳನ್ನು ಸಲ್ಲಿಸಿದ್ದು, ಶುಭಹಾರೈಕೆಯ ಟ್ವೀಟ್ ಮಾಡಿದ್ದಾರೆ.

ಪ್ರಗ್ಯಾನ್ ಓಜಾ ಶುಭ ಹಾರೈಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.