ADVERTISEMENT

ಕೆಎಸ್‌ಇಬಿ ತಂಡಕ್ಕೆ ಸಿಎಂ ಕಪ್

​ಪ್ರಜಾವಾಣಿ ವಾರ್ತೆ
Published 12 ಜನವರಿ 2020, 20:15 IST
Last Updated 12 ಜನವರಿ 2020, 20:15 IST
ಸಿಎಂ ಕಪ್‌ನೊಂದಿಗೆ ತಿರುವನಂತಪುರದ ಕೆಎಸ್‌ಇಬಿ ತಂಡ
ಸಿಎಂ ಕಪ್‌ನೊಂದಿಗೆ ತಿರುವನಂತಪುರದ ಕೆಎಸ್‌ಇಬಿ ತಂಡ   

ಮಂಡ್ಯ: ತಿರುವನಂತಪುರದ ಕೆಎಸ್‌ ಇಬಿ ತಂಡ ಮಂಡ್ಯ ಜಿಲ್ಲಾ ಫುಟ್‌ಬಾಲ್‌ ಸಂಸ್ಥೆ ಆಶ್ರಯದಲ್ಲಿ ನಡೆದ ಅಖಿಲ ಭಾರತ ಟೂರ್ನಿಯಲ್ಲಿ ಗೆದ್ದು ‘ಸಿಎಂ ಕಪ್‌’ ತನ್ನದಾಗಿಸಿಕೊಂಡಿತು. ‌

ಸರ್‌ ಎಂ.ವಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಫೈನಲ್‌ನಲ್ಲಿ ಕೆಎಸ್‌ ಇಬಿ ತಂಡ ಪೆನಾಲ್ಟಿ ಶೂಟೌಟ್‌ನಲ್ಲಿ 5-3 ಗೋಲುಗಳಿಂದ ಬೆಂಗಳೂರಿನ ಎಚ್‌ಎಎಲ್‌ ತಂಡವನ್ನು ಮಣಿಸಿತು. ‌‌

ಪ್ರಬಲ ಪೈಪೋಟಿ ಕಂಡುಬಂದ ಪಂದ್ಯ ನಿಗದಿತ ಅವಧಿಯಲ್ಲಿ ಗೋಲು ರಹಿತ ಡ್ರಾದಲ್ಲಿ ಕೊನೆಗೊಂಡಿತು. ಇದ ರಿಂದ ವಿಜೇತರನ್ನು ನಿರ್ಣಯಿಸಲು ಪೆನಾಲ್ಟಿ ಶೂಟೌಟ್‌ ಮೊರೆ ಹೋಗಲಾ ಯಿತು. ಕೆಎಸ್‌ಇಬಿ ತಂಡದ ಪರ ಶಿನು, ಪಿ.ಮೊಹಮ್ಮದ್‌, ವಿಘ್ನೇಶ್‌, ಜಿನೇಶ್‌ ಮತ್ತು ಫ್ರಾನ್ಸಿಸ್‌ ಗೋಲು ಗಳಿಸಿದರು. ಎಚ್‌ಎಎಲ್ ಪರ ರವಿ, ಬಿಜೋಯ್‌ ಹಾಗೂ ಆದಿರಾಜ್‌ ಚೆಂಡನ್ನು ಗುರಿ ಸೇರಿಸಿದರು. ಚಾಂಪಿಯನ್‌ ತಂಡ ₹50 ಸಾವಿರ ನಗದು ಬಹುಮಾನ ತನ್ನದಾಗಿಸಿಕೊಂಡರೆ, ‘ರನ್ನರ್‌ ಅಪ್‌’ ತಂಡ ₹25 ಸಾವಿರ ಬಹುಮಾನ ಗಳಿಸಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.