ಕಠ್ಮಂಡು: ಗುರುಕೀರತ್ ಸಿಂಗ್ ಗಳಿಸಿದ ಎರಡು ಗೋಲುಗಳ ಬಲದಿಂದ ಭಾರತ 18 ವರ್ಷದೊಳಗಿನವರ ತಂಡ ಸ್ಯಾಫ್ ಫುಟ್ಬಾಲ್ ಚಾಂಪಿಯನ್ಷಿಪ್ನಲ್ಲಿ ಶ್ರೀಲಂಕಾವನ್ನು 3–0ಯಿಂದ ಮಣಿಸಿದೆ. ಇದರೊಂದಿಗೆ ಬುಧವಾರ ಟೂರ್ನಿಯ ಸೆಮಿಫೈನಲ್ಗೆ ಲಗ್ಗೆಯಿಟ್ಟಿದೆ.
ಅಮನ್ ಚೆಟ್ರಿ ಒಂದು ಗೋಲು ದಾಖಲಿಸಿ ಗುರುಕೀರತ್ ಅವರಿಗೆ ಉತ್ತಮ ಸಹಕಾರ ನೀಡಿದರು.
ಆಕ್ರಮಣಕಾರಿಯಾಗಿ ಆಟ ಆರಂಭಿಸಿದರೂ ಭಾರತಕ್ಕೆ ಲಂಕಾದ ಡಿಫೆನ್ಸ್ ಕೋಟೆಯನ್ನು ಹೆಚ್ಚು ಬೇಧಿಸಲು ಸಾಧ್ಯವಾಗಲಿಲ್ಲ. ಮೊದಲಾರ್ಧ ಮುಗಿಯುವ ವೇಳೆ ಒಂದೂ ಗೋಲು ದಾಖಲಾಗಲಿಲ್ಲ. ದ್ವಿತೀಯಾರ್ಧವನ್ನು ಭಾರತ ಉತ್ಸಾಹದಿಂದಲೇ ಆರಂಭಿಸಿತು. 65ನೇ ನಿಮಿಷದಲ್ಲಿ ಗುರುಕೀರತ್ ಖಾತೆ ತೆರೆದರು. ಅಮನ್ ಹಾಗೂ ಅಮನ್ ಪಂದ್ಯದ ಕೊನೆಯ ಹಂತದಲ್ಲಿ ಎರಡು ಗೋಲು ದಾಖಲಿಸಿ ತಂಡದ ಜಯ ಖಚಿತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.