ಬೆಂಗಳೂರು: ಇದೇ 23ರಿಂದ ದೆಹಲಿಯಲ್ಲಿ ನಡೆಯಲಿರುವ ಸಂತೋಷ್ ಟ್ರೋಫಿ ಫುಟ್ಬಾಲ್ ಟೂರ್ನಿಗೆ ಕರ್ನಾಟಕ ತಂಡವನ್ನು ಕಾರ್ತಿಕ್ ಗೋವಿಂದ ಸ್ವಾಮಿ ಮುನ್ನಡೆಸಲಿದ್ದಾರೆ. 22 ಆಟಗಾರರ ತಂಡವನ್ನು ಮಂಗಳವಾರ ಪ್ರಕಟಿಸಲಾಗಿದೆ.
ಒಂದನೇ ಗುಂಪಿನಲ್ಲಿ ಸ್ಥಾನ ಪಡೆದಿರುವ ಕರ್ನಾಟಕ, 23ರಂದು ಮೊದಲ ಪಂದ್ಯದಲ್ಲಿ ಗುಜರಾತ್ ತಂಡವನ್ನು ಎದುರಿಸಲಿದೆ.
25ರಂದು ಉತ್ತರಾಖಂಡ, 27ರಂದು ಲಡಾಕ್, 29ರಂದು ತ್ರಿಪುರ ಮತ್ತು 31ರಂದು ದೆಹಲಿ ವಿರುದ್ಧ ಕರ್ನಾಟಕ ತಂಡ ಆಡಲಿದೆ.
ಕರ್ನಾಟಕ ತಂಡ ಇಂತಿದೆ: ಕಾರ್ತಿಕ್ ಗೋವಿಂದಸ್ವಾಮಿ (ನಾಯಕ), ಸತ್ಯಜೀತ್ ಬೊರ್ದೊಲಾಯಿ, ಶ್ರೀಜಿತ್ ಆರ್, ಕೆವಿನ್ ಕೋಶಿ, ಸುನಿಲ್ ಕುಮಾರ್ ಎಂ, ರಾಬಿನ್ ಯಾದವ್, ನಿಖಿಲ್ ಜಿ, ಮನೋಜ್ ಸ್ವಾಮಿ ಕಣ್ಣನ್, ಜಾನ್ಸನ್ ಎ, ಪ್ರಶಾಂತ್ ಕಳಿಂಗ, ಪ್ರದೀಶನ್ ಮರಿಯದಾಸನ್, ಸತೀಶ್ಕುಮಾರ್ ಎಂ.ಆರ್, ಎಫ್. ಲಾಲ್ರೆಮ್ತ್ಲುಂಗಾ, ಬೆಕೆ ಓರಂ, ಕಮಲೇಶ್ ಪಿ, ಶಜಾನ್ ಫ್ರಾಂಕ್ಲಿನ್, ಅಪ್ಪು, ಅಂಕಿತ್ ಪಿ, ಅಭಿಷೇಕ್ ಶಂಕರ್ ಪವಾರ್, ಶೆಲ್ಟನ್ ಪಾಲ್, ರಾಜಗಣಪತಿ ಕೆ, ಜೇಕಬ್ ಜಾನ್ ಕಟ್ಟೂಕರೆನ್.
ಮ್ಯಾನೇಜರ್: ಸರವಣನ್, ಕೋಚ್: ಆರ್. ರವಿಬಾಬು, ಸಹಾಯಕ ಕೋಚ್: ಜಾನ್ ಕೆನೆತ್ ರಾಜ್, ಫಿಸಿಯೊ: ರೋಹಿತ್ ಕುಮಾರ್ ಹಲ್ದರ್.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.