ADVERTISEMENT

ಅಖಿಲ ಭಾರತ ಓಪನ್‌ ಸ್ನೂಕರ್‌ ಟೂರ್ನಿ: ಮೂರನೇ ಸುತ್ತಿಗೆ ಅಭಿಷೇಕ್‌, ಪ್ರತೀಷ್‌

ಅಖಿಲ ಭಾರತ ಓಪನ್‌ ಸ್ನೂಕರ್‌ ಟೂರ್ನಿ: ಶ್ರೀರಾಮ್‌ಗೆ ಸೋಲು

ಪಿಟಿಐ
Published 20 ನವೆಂಬರ್ 2020, 12:54 IST
Last Updated 20 ನವೆಂಬರ್ 2020, 12:54 IST
ಸ್ನೂಕರ್– ಸಾಂದರ್ಭಿಕ ಚಿತ್ರ
ಸ್ನೂಕರ್– ಸಾಂದರ್ಭಿಕ ಚಿತ್ರ   

ಚೆನ್ನೈ: ತಮಿಳುನಾಡಿನ ಅಭಿಷೇಕ್‌ ಅವರು ತಮ್ಮದೇ ರಾಜ್ಯದ ಶ್ರೀರಾಮ್ ಅವರನ್ನು ಸೋಲಿಸಿ, ಅಖಿಲ ಭಾರತಅಜಯ್‌ ರಸ್ತೋಗಿ ಸ್ಮಾರಕ ಓಪನ್‌ ಸ್ನೂಕರ್‌ ಚಾಂಪಿಯನ್‌ಷಿಪ್‌ನ ಮೂರನೇ ಸುತ್ತು ತಲುಪಿದ್ದಾರೆ. ಶುಕ್ರವಾರ ನಡೆದ ಪಂದ್ಯದಲ್ಲಿ ಅಭಿಷೇಕ್ ಅವರಿಗೆ 4–1ರಿಂದ ಜಯ ಒಲಿಯಿತು.

ಪ್ರತೀಶ್‌ ಹಾಗೂ ಹರಿಹರನ್ ರಾಜಮಣಿ (ಇಬ್ಬರೂ ತಮಿಳುನಾಡು) ಕೂಡ ಮೂರನೇ ಸುತ್ತು ಪ್ರವೇಶಿಸಿದರು.

ಮೊದಲ ಸುತ್ತಿನ ಪಂದ್ಯಗಳಲ್ಲಿ ತಮಿಳುನಾಡಿನ ಉದಯ್‌ ಕುಮಾರ್ ಅವರು ಸತೀಶ್‌ ಕುಮಾರ್‌ ಎದುರು, ಪುದುಚೇರಿಯ ರಾಜಮೋಹನ್‌ ಅವರು ಸೌಮಿನಿ ಶ್ರೀನಿವಾಸ್‌ ವಿರುದ್ಧ ಗೆದ್ದು ಮೂರನೇ ಸುತ್ತಿಗೆ ಲಗ್ಗೆಯಿಟ್ಟರು.

ADVERTISEMENT

ಕೋವಿಡ್‌–19 ಹಿನ್ನೆಲೆಯಲ್ಲಿ ಎಲ್ಲ ಕ್ರೀಡಾ ಚಟುವಟಿಕೆಗಳು ಸ್ಥಗಿತಗೊಂಡ ಬಳಿಕ ಚೆನ್ನೈನಲ್ಲಿ ನಡೆಯುತ್ತಿರುವ ರಾಷ್ಟ್ರಮಟ್ಟದ ಮೊದಲ ಟೂರ್ನಿ ಇದು. ಕೋವಿಡ್‌ ತಡೆ ಮಾರ್ಗಸೂಚಿಗಳನ್ನು ಟೂರ್ನಿಯಲ್ಲಿ ಪಾಲಿಸಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಲಿಂಕ್:ಆಂಡ್ರಾಯ್ಡ್ ಆ್ಯಪ್|ಐಒಎಸ್ ಆ್ಯಪ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.