
ಬೆಂಗಳೂರು: ಕರ್ನಾಟಕ ಮಹಿಳೆಯರ ತಂಡವು ತಮಿಳುನಾಡಿನ ದಿಂಡಿಗಲ್ನಲ್ಲಿ ಭಾನುವಾರ ಮುಕ್ತಾಯಗೊಂಡ 71ನೇ ರಾಷ್ಟ್ರೀಯ ಸೀನಿಯರ್ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ನಲ್ಲಿ ರನ್ನರ್ಸ್ ಅಪ್ ಆಯಿತು.
ಫೈನಲ್ ಹಣಾಹಣಿಯಲ್ಲಿ ಲಕ್ಷ್ಮೀದೇವಿ ನಾಯಕತ್ವದ ಕರ್ನಾಟಕ ತಂಡ 27–35, 31–35ರಿಂದ ಆತಿಥೇಯ ತಮಿಳುನಾಡು ತಂಡಕ್ಕೆ ಮಣಿಯಿತು. ಇದಕ್ಕೂ ಮೊದಲು ರಾಜ್ಯ ತಂಡವು ಸೆಮಿಫೈನಲ್ನಲ್ಲಿ ಆಂಧ್ರಪ್ರದೇಶ ವಿರುದ್ಧ, ಕ್ವಾರ್ಟರ್ ಫೈನಲ್ನಲ್ಲಿ ಛತ್ತೀಸಗಢ ವಿರುದ್ಧ ಗೆಲುವು ಸಾಧಿಸಿತ್ತು. ಟೂರ್ನಿಯುದ್ದಕ್ಕೂ ಮಿಂಚಿದ್ದ ಕರ್ನಾಟಕ ತಂಡದ ತನುಶ್ರೀ ಅವರು ‘ಸ್ಟಾರ್ ಆಫ್ ಇಂಡಿಯಾ’ ಪ್ರಶಸ್ತಿ ಪಡೆದರು.
ಇದೇ ಕೂಟದಲ್ಲಿ ಭಾಗವಹಿಸಿದ್ದ ರಾಜ್ಯದ ಪುರುಷರ ಮತ್ತು ಜೂನಿಯರ್ ಬಾಲಕರ ತಂಡಗಳು ಸೆಮಿಫೈನಲ್ನಲ್ಲಿ ಅಭಿಯಾನ ಮುಗಿಸಿದವು. ಪುರುಷರ ವಿಭಾಗದಲ್ಲಿ ನವೀನ್ ಮತ್ತು ಜೂನಿಯರ್ ಬಾಲಕರ ವಿಭಾಗದಲ್ಲಿ ಕೋಮಲ್ ಅವರು ‘ಸ್ಟಾರ್ ಆಫ್ ಇಂಡಿಯಾ’ ಪ್ರಶಸ್ತಿ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.