ಬೆಂಗಳೂರು: ಆಕರ್ಷ್ ಅವರ ಆಕರ್ಷಕ ಆಟದ ನೆರವಿನಿಂದ ಮೈಸೂರಿನ ಬಿಇಎಮ್ಎಲ್ ತಂಡವು ಎಸ್.ರಂಗರಾಜನ್ ಸ್ಮಾರಕ ಟ್ರೋಫಿಗಾಗಿ ನಡೆಯುತ್ತಿರುವ ರಾಜ್ಯ ‘ಸಿ’ ಡಿವಿಷನ್ ಲೀಗ್ ಬ್ಯಾಸ್ಕೆಟ್ಬಾಲ್ ಚಾಂಪಿಯನ್ಷಿಪ್ನ ಪಂದ್ಯದಲ್ಲಿ ಗೆದ್ದಿದೆ.
ಕಂಠೀರವ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಬಿಇಎಮ್ಎಲ್ 64–43 ಪಾಯಿಂಟ್ಸ್ನಿಂದ ಮೈಸೂರು ಬಿ.ಸಿ. ತಂಡವನ್ನು ಪರಾಭವಗೊಳಿಸಿತು.
ಆರಂಭದಿಂದಲೇ ಚುರುಕಿನ ಸಾಮರ್ಥ್ಯ ತೋರಿದ ಬಿಇಎಮ್ಎಲ್ ತಂಡವು 31–17 ಮುನ್ನಡೆಯೊಂದಿಗೆ ವಿರಾಮಕ್ಕೆ ಹೋಯಿತು. ಆಕರ್ಷ್ 20 ಪಾಯಿಂಟ್ಸ್ ಗಳಿಸಿ ಗಮನ ಸೆಳೆದರು.
ಇನ್ನೊಂದು ಪಂದ್ಯದಲ್ಲಿ ಯಂಗ್ ಬುಲ್ಸ್ ಕ್ಲಬ್ 63–55 ಪಾಯಿಂಟ್ಸ್ನಿಂದ ಮೈಸೂರಿನ ಪ್ರೊಟೆಕ್ ಚಾಲೆಂಜರ್ಸ್ ಎದುರು ವಿಜಯಿಯಾಯಿತು. ಬುಲ್ಸ್ ತಂಡದ ರಂಗನ ಗೌಡ 19 ಪಾಯಿಂಟ್ಸ್ ಕಲೆಹಾಕಿದರು. ಚಾಲೆಂಜರ್ಸ್ ತಂಡದ ಸಚಿನ್ ಕೂಡಾ ಇಷ್ಟೇ ಪಾಯಿಂಟ್ಸ್ ಸಂಗ್ರಹಿಸಿದರು.
ಇತರ ಪಂದ್ಯಗಳಲ್ಲಿ ಪಟ್ಟಾಭಿರಾಮ ಕ್ಲಬ್ 30–27ರಲ್ಲಿ ಹೊಸಪೇಟೆಯ ವಿಜಯನಗರ ಕ್ಲಬ್ ಎದುರೂ, ಹಾಸನದ ಹೊಯ್ಸಳ ಕ್ಲಬ್ 58–33ರಲ್ಲಿ ಸಿಜೆಸಿ ಎದುರೂ, ಬಿ.ಸಿ.ಬಿ.ಸಿ 65–52ರಲ್ಲಿ ಡಿಆರ್ಡಿಒ ಮೇಲೂ, ಎಮ್ಸಿಎಚ್ಎಸ್ 42–21ರಲ್ಲಿ ಎಸಿಇ ಬೀದರ್ ವಿರುದ್ಧವೂ, ಸಹಕಾರನಗರ ಕ್ಲಬ್ 27–11ರಲ್ಲಿ ಮೈಸೂರಿನ ಯಂಗ್ ಚಾಲೆಂಜರ್ಸ್ ಮೇಲೂ, ಭಾರತ್ ಕ್ಲಬ್ 54–27ರಲ್ಲಿ ದಾವಣಗೆರೆಯ ಗ್ರೀನ್ಸ್ ವಿರುದ್ಧವೂ ಗೆದ್ದವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.