ಬ್ಯಾಸ್ಕೆಟ್ಬಾಲ್
ಬೆಂಗಳೂರು: ನೆಟ್ಲ ಚಾಣಕ್ಯ ಹಾಗೂ ರೆಹಾನ್ ಖಾನ್ ಅವರ ಆಟದ ಬಲದಿಂದ ಚಿಕ್ಕಮಗಳೂರು ಜಿಲ್ಲಾ ತಂಡವು ಎಸ್. ರಂಗರಾಜನ್ ಸ್ಮರಣಾರ್ಥ ಟ್ರೋಫಿಗಾಗಿ ನಡೆಯುತ್ತಿರುವ ರಾಜ್ಯ ‘ಸಿ’ ಡಿವಿಷನ್ ಲೀಗ್ ಪುರುಷರ ಬ್ಯಾಸ್ಕೆಟ್ಬಾಲ್ ಚಾಂಪಿಯನ್ಷಿಪ್ನ ಪಂದ್ಯದಲ್ಲಿ 66–49ರಿಂದ ಮೌಂಟ್ಸ್ ಕ್ಲಬ್ ತಂಡವನ್ನು ಸೋಲಿಸಿತು.
ಕಂಠೀರವ ಕ್ರೀಡಾಂಗಣದ ಬ್ಯಾಸ್ಕೆಟ್ಬಾಲ್ ಕೋರ್ಟ್ನಲ್ಲಿ ಬುಧವಾರ ನಡೆದ ಲೀಗ್ ಹಂತದ ಪಂದ್ಯದಲ್ಲಿ ಚಿಕ್ಕಮಗಳೂರು ತಂಡವು ಆರಂಭದಿಂದಲೇ ಹಿಡಿತ ಸಾಧಿಸಿತ್ತು. ಚಾಣಕ್ಯ 27 ಹಾಗೂ ರೆಹಾನ್ 17 ಅಂಕ ಗಳಿಸಿದರು. ಮೌಂಟ್ಸ್ ಕ್ಲಬ್ ತಂಡದ ಆ್ಯಂಡ್ರ್ಯೂ 15 ಅಂಕಗಳನ್ನು ಕಲೆಹಾಕಿದರು.
ಫಲಿತಾಂಶಗಳು: ಅಪ್ಪಯ್ಯ ಬಿ.ಸಿ ತಂಡವು 73–66ರಿಂದ ಧಾರವಾಡ ಜಿಲ್ಲೆ ಎ ವಿರುದ್ಧ; ಚಿಕ್ಕಮಗಳೂರು ಜಿಲ್ಲಾ ತಂಡ 66–49ರಿಂದ ಮೌಂಟ್ಸ್ ಕ್ಲಬ್ ವಿರುದ್ಧ; ಎಂಇಜಿ & ಸೆಂಟರ್ 69–30ರಿಂದ ಧಾರವಾಡ ಜಿಲ್ಲೆ ಬಿ ವಿರುದ್ಧ; ರಾಜ್ಕುಮಾರ್ ಬಿ.ಸಿ 62–43ರಿಂದ ಕೋಲಾರ ಜಿಲ್ಲೆ ವಿರುದ್ಧ; ಡಿಆರ್ಡಿಒ ತಂಡ 53–38ರಿಂದ ಹಾಸನ ಜಿಲ್ಲೆ ವಿರುದ್ಧ; ಹೂಪ್ಸ್ 7 ಬಿ.ಸಿ ತಂಡ 64–37ರಿಂದ ಮೈಸೂರು ಜಿಲ್ಲೆ ಎ ವಿರುದ್ಧ; ಸಿನ್ಸಿನಾಟೀಸ್ ಬಿ.ಸಿ ತಂಡವು 66–49ರಿಂದ ಧಾರವಾಡ ಜಿಲ್ಲೆ ಎ ವಿರುದ್ಧ; ಮೈಸೂರು ಜಿಲ್ಲೆ ಬಿ ತಂಡವು 80–77ರಿಂದ ಅಪ್ಪಯ್ಯ ಬಿ.ಸಿ ವಿರುದ್ಧ ಹಾಗೂ ಚಿಕ್ಕಮಗಳೂರು ಜಿಲ್ಲಾ ತಂಡ 72–57ರಿಂದ ರಾಜ್ಕುಮಾರ್ ಬಿ.ಸಿ ವಿರುದ್ಧ ಗೆಲುವು ಸಾಧಿಸಿದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.