ADVERTISEMENT

ಬ್ಯಾಸ್ಕೆಟ್‌ಬಾಲ್‌: ಕರ್ನಾಟಕಕ್ಕೆ ನಿರಾಸೆ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2019, 19:46 IST
Last Updated 22 ಆಗಸ್ಟ್ 2019, 19:46 IST

ಬೆಂಗಳೂರು: ಕರ್ನಾಟಕ ತಂಡದವರು ಮುಲ್ಕಿ ಸುಂದರ ರಾಮ್‌ ಶೆಟ್ಟಿ ಅಖಿಲ ಭಾರತ ಆಹ್ವಾನಿತ ಬ್ಯಾಸ್ಕೆಟ್‌ಬಾಲ್‌ ಟೂರ್ನಿಯ ಪಂದ್ಯದಲ್ಲಿ ನಿರಾಸೆ ಕಂಡಿದ್ದಾರೆ.

ಮಲ್ಲೇಶ್ವರದ ಬೀಗಲ್ಸ್‌ ಬ್ಯಾಸ್ಕೆಟ್‌ಬಾಲ್‌ ಅರೇನಾದಲ್ಲಿ ಗುರುವಾರ ನಡೆದ ‘ಬಿ’ ಗುಂ‍ಪಿನ ಹಣಾಹಣಿಯಲ್ಲಿ ಗುಜರಾತ್‌ನ ಇನ್‌ಕಮ್‌ ಟ್ಯಾಕ್ಸ್‌ ತಂಡ 82–62 ಪಾಯಿಂಟ್ಸ್‌ನಿಂದ ಆತಿಥೇಯರನ್ನು ಮಣಿಸಿತು.

ಕರ್ನಾಟಕ ತಂಡ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಮೊದಲ ಕ್ವಾರ್ಟರ್‌ನಲ್ಲಿ ಇನ್‌ಕಮ್‌ ಟ್ಯಾಕ್ಸ್‌ 29–13ರಿಂದ ಮುಂದಿತ್ತು. ಎರಡನೇ ಕ್ವಾರ್ಟರ್‌ನಲ್ಲಿ ಮಿಂಚಿದ ರಾಜ್ಯ ತಂಡ ಹಿನ್ನಡೆಯನ್ನು 28–43ಕ್ಕೆ ತಗ್ಗಿಸಿಕೊಂಡಿತು. ನಂತರದ ಎರಡು ಕ್ವಾರ್ಟರ್‌ಗಳಲ್ಲಿ ಪ್ರಾಬಲ್ಯ ಮೆರೆದ ಇನ್‌ಕಮ್‌ ಟ್ಯಾಕ್ಸ್‌ ತಂಡ ಗೆಲುವಿನ ತೋರಣ ಕಟ್ಟಿತು. ದಿಶಾಂತ್‌ ಶಾ ಮತ್ತು ವಿನಯ್‌ ಕೌಶಿಕ್‌ ತಲಾ 16 ಪಾಯಿಂಟ್ಸ್‌ ಕಲೆಹಾಕಿದರು.

ADVERTISEMENT

ರಾಜ್ಯ ತಂಡದ ಮನೋಜ್‌ (10), ನಿಖಿಲ್‌ (12) ಮತ್ತು ಗೌತಮ್‌ (10) ಸೋಲಿನ ನಡುವೆಯೂ ಗಮನ ಸೆಳೆದರು.

‘ಎ’ ಗುಂಪಿನ ಪಂದ್ಯದಲ್ಲಿ ಚೆನ್ನೈಯ ಐಸಿಎಫ್‌ 71–68 ಪಾಯಿಂಟ್ಸ್‌ನಿಂದ ಡಿಎಲ್‌ಡಬ್ಲ್ಯು ಎದುರು ಗೆದ್ದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.