ADVERTISEMENT

ಅಂಧರ ವಾಲಿಬಾಲ್‌: ಪ್ರಶಸ್ತಿ ಗೆದ್ದ ದೀಪಾಂಜಲಿ ತಂಡ

ರಾಜ್ಯಮಟ್ಟದ ಅಂಧರ ವಾಲಿಬಾಲ್‌ ಟೂರ್ನಿ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2021, 19:45 IST
Last Updated 7 ಮಾರ್ಚ್ 2021, 19:45 IST
ದೀಪಾಂಜಲಿ ಹಾಗೂ ಸ್ನೇಹದೀಪ ತಂಡಗಳ ನಡುವಿನ ಹಣಾಹಣಿಯ ನೋಟ
ದೀಪಾಂಜಲಿ ಹಾಗೂ ಸ್ನೇಹದೀಪ ತಂಡಗಳ ನಡುವಿನ ಹಣಾಹಣಿಯ ನೋಟ   

ಚಿತ್ರದುರ್ಗ: ಇಲ್ಲಿನ ಮಾಧ್ಯಮಿಕ ಶಾಲಾ ಆವರಣದಲ್ಲಿ ನಡೆದ ರಾಜ್ಯಮಟ್ಟದ ಅಂಧರ ವಾಲಿಬಾಲ್‌ ಟೂರ್ನಿಯಲ್ಲಿ ಬೆಂಗಳೂರಿನ ದೀಪಾಂಜಲಿ ತಂಡವು ರಾಣೆಬೆನ್ನೂರಿನ ಸ್ನೇಹದೀಪ ತಂಡವನ್ನು ಭಾನುವಾರ 26–24, 25–19ರಿಂದ ಮಣಿಸಿ ಪ್ರಶಸ್ತಿ ಗೆದ್ದಿತು.

ಪ್ರಶಸ್ತಿ ಗೆದ್ದ ತಂಡಕ್ಕೆ ₹ 7 ಸಾವಿರ ಹಾಗೂ ರನ್ನರ್‌ ಅಪ್‌ ತಂಡಕ್ಕೆ ₹ 5 ಸಾವಿರ ನಗದು ಬಹುಮಾನ ನೀಡಲಾಯಿತು. ಚೆಂಡು ಸಾಗಲು ಮಾತ್ರ ಸ್ಥಳಾವಕಾಶ ಕಲ್ಪಿಸಿ ನೆಟ್‌ ಕಟ್ಟಲಾಗಿತ್ತು. ನೆಲದ ಮೇಲೆ ಉರುಳುತ್ತ ಬರುವ ಚೆಂಡಿನ ಶಬ್ದ ಗ್ರಹಿಸಿ ಆಡಬೇಕು. ಇಬ್ಬರು ಅರೆ ಅಂಧರು ಹಾಗೂ ನಾಲ್ವರು ಪೂರ್ಣ ಅಂಧರು ಅಂಕಣದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT