ಚಿತ್ರದುರ್ಗ: ಇಲ್ಲಿನ ಮಾಧ್ಯಮಿಕ ಶಾಲಾ ಆವರಣದಲ್ಲಿ ನಡೆದ ರಾಜ್ಯಮಟ್ಟದ ಅಂಧರ ವಾಲಿಬಾಲ್ ಟೂರ್ನಿಯಲ್ಲಿ ಬೆಂಗಳೂರಿನ ದೀಪಾಂಜಲಿ ತಂಡವು ರಾಣೆಬೆನ್ನೂರಿನ ಸ್ನೇಹದೀಪ ತಂಡವನ್ನು ಭಾನುವಾರ 26–24, 25–19ರಿಂದ ಮಣಿಸಿ ಪ್ರಶಸ್ತಿ ಗೆದ್ದಿತು.
ಪ್ರಶಸ್ತಿ ಗೆದ್ದ ತಂಡಕ್ಕೆ ₹ 7 ಸಾವಿರ ಹಾಗೂ ರನ್ನರ್ ಅಪ್ ತಂಡಕ್ಕೆ ₹ 5 ಸಾವಿರ ನಗದು ಬಹುಮಾನ ನೀಡಲಾಯಿತು. ಚೆಂಡು ಸಾಗಲು ಮಾತ್ರ ಸ್ಥಳಾವಕಾಶ ಕಲ್ಪಿಸಿ ನೆಟ್ ಕಟ್ಟಲಾಗಿತ್ತು. ನೆಲದ ಮೇಲೆ ಉರುಳುತ್ತ ಬರುವ ಚೆಂಡಿನ ಶಬ್ದ ಗ್ರಹಿಸಿ ಆಡಬೇಕು. ಇಬ್ಬರು ಅರೆ ಅಂಧರು ಹಾಗೂ ನಾಲ್ವರು ಪೂರ್ಣ ಅಂಧರು ಅಂಕಣದಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.