ADVERTISEMENT

ಅಮಗೊಂಡ ‘ಹಂಪಿ ವೀರ ಕೇಸರಿ’

​ಪ್ರಜಾವಾಣಿ ವಾರ್ತೆ
Published 11 ಜನವರಿ 2020, 19:45 IST
Last Updated 11 ಜನವರಿ 2020, 19:45 IST
‘ಹಂಪಿ ಉತ್ಸವ’ದ ಪ್ರಯುಕ್ತ ಹೊಸಪೇಟೆ ತಾಲ್ಲೂಕಿನ ಹೊಸಮಲಪನಗುಡಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ 57 ಕೆ.ಜಿ. ತೂಕದ ಕುಸ್ತಿ ಸ್ಪರ್ಧೆಯಲ್ಲಿ ಗದಗಿನ ಪ್ರಶಾಂತ್‌ ಗೌಡ ಅವರು ದಾವಣಗೆರೆಯ ರೋಹನ್‌ ಅವರನ್ನು ಚಿತ್‌ ಮಾಡಿದ ರೋಮಾಂಚಕ ಕ್ಷಣ -ಪ್ರಜಾವಾಣಿ ಚಿತ್ರ/ ತಾಜುದ್ದೀನ್‌ ಆಜಾದ್‌
‘ಹಂಪಿ ಉತ್ಸವ’ದ ಪ್ರಯುಕ್ತ ಹೊಸಪೇಟೆ ತಾಲ್ಲೂಕಿನ ಹೊಸಮಲಪನಗುಡಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ 57 ಕೆ.ಜಿ. ತೂಕದ ಕುಸ್ತಿ ಸ್ಪರ್ಧೆಯಲ್ಲಿ ಗದಗಿನ ಪ್ರಶಾಂತ್‌ ಗೌಡ ಅವರು ದಾವಣಗೆರೆಯ ರೋಹನ್‌ ಅವರನ್ನು ಚಿತ್‌ ಮಾಡಿದ ರೋಮಾಂಚಕ ಕ್ಷಣ -ಪ್ರಜಾವಾಣಿ ಚಿತ್ರ/ ತಾಜುದ್ದೀನ್‌ ಆಜಾದ್‌   

ಹೊಸಮಲಪನಗುಡಿ (ಹೊಸಪೇಟೆ ತಾಲ್ಲೂಕು): ‘ಹಂಪಿ ಉತ್ಸವ’ದ ಪ್ರಯುಕ್ತ ಶನಿವಾರ ಇಲ್ಲಿ ಹಮ್ಮಿಕೊಂಡಿದ್ದ ಕುಸ್ತಿ ಸ್ಪರ್ಧೆಯಲ್ಲಿ ಅತ್ಯುತ್ತಮ ಪಟ್ಟುಗಳೊಂದಿಗೆ ಬೆಳಗಾವಿಯ ಬಿರೇಶ್‌ ಅವರನ್ನು ಮಣಿಸಿ, ವಿಜಯಪುರದ ಅಮಗೊಂಡ ಅವರು ‘ಹಂಪಿ ವೀರ ಕೇಸರಿ’ ಬಿರುದಿಗೆ ಪಾತ್ರರಾದರು.

74 ಕೆ.ಜಿ.ಗಿಂತ ಹೆಚ್ಚಿನ ತೂಕದ ಸ್ಪರ್ಧೆಯಲ್ಲಿ ಅಮಗೊಂಡ ಈ ಸಾಧನೆ ಮಾಡಿದರು. ಬಿರೇಶ್‌ ದ್ವಿತೀಯ ಹಾಗೂ ದಾವಣಗೆರೆಯ ಪಂಕಜ್‌ ಕುಮಾರ್‌ ತೃತೀಯ ಬಹುಮಾನಕ್ಕೆ ತೃಪ್ತರಾದರು.

74 ಕೆ.ಜಿ. ವಿಭಾಗದಲ್ಲಿ ಗದಗಿನ ಪಾಲಾಕ್ಷಗೌಡ, ದಾವಣಗೆರೆಯವರಾದ ಅನಿಲ್‌ ದಳವಾಯಿ ಹಾಗೂ ವೆಂಕಟೇಶ್‌ ಜಗನ್ನಾಥ್‌ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ಗಳಿಸಿದರು.

ADVERTISEMENT

54 ಕೆ.ಜಿ. ವಿಭಾಗದಲ್ಲಿ ಗದಗಿನ ಪ್ರಶಾಂತ ಗೌಡ ಪ್ರಥಮ, ಹರಪನಹಳ್ಳಿಯ ಕೊರವರ ಸಂಜೀವ ದ್ವಿತೀಯ ಹಾಗೂ ದಾವಣಗೆರೆಯ ಬಿ.ಎಸ್‌. ಪ್ರತೀಕ್‌ ತೃತೀಯ ಸ್ಥಾನ ಪಡೆದರು.

61 ಕೆ.ಜಿ. ವಿಭಾಗದಲ್ಲಿ ದಾವಣಗೆರೆಯ ಪ್ರಭಾಕರ್‌ ಫಾಲ್ಕೆ, ಬೆಳಗಾವಿಯ ಮುರುಗೇಶ್‌ ತಮಡಿ ಹಾಗೂ ದಾವಣಗೆರೆಯ ಎಂ. ಲಕ್ಷ್ಮಣ್‌ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಗಳಿಸಿದರು.

65 ಕೆ.ಜಿ. ವಿಭಾಗದಲ್ಲಿ ಬೆಳಗಾವಿಯವರಾದ ಕಾರ್ತಿಕ್‌ ಹಿತ್ತಾಂಗಿ, ಶಿವಾನಂದ ತಳವಾರ ಕ್ರಮವಾಗಿ ಪ್ರಥಮ, ದ್ವಿತೀಯ ಬಹುಮಾನ ಗಳಿಸಿದರೆ, ದಾವಣಗೆರೆಯ ಮಂಜುನಾಥ ತೃತೀಯ ಸ್ಥಾನ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.