ADVERTISEMENT

ಸದರ್ನ್‌ ಕಮಾಂಡ್‌ಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2020, 20:00 IST
Last Updated 8 ಮಾರ್ಚ್ 2020, 20:00 IST
ಪ್ರಶಸ್ತಿ ಗೆದ್ದ ಸದರ್ನ್‌ ಕಮಾಂಡ್‌ ತಂಡ (ನಿಂತವರು– ಎಡದಿಂದ) ಕಿರಣ್‌ ಎಸ್‌, ಬೋಪಣ್ಣ, ಪಳನಿ, ಸಾದಿಕ್‌, ಅಜಿತ್‌, ಆಶಿಶ್‌ (ಕೋಚ್‌), ಸುಬೇದಾರ್‌ ಮೇಜರ್‌ ಸೈನಿ, ಪೊನ್ನಪ್ಪ (ಕೋಚ್‌), ಸುದೀಶ್‌ (ಕೋಚ್‌), ಪಾರ್ಥಿಬ್‌ (ತಂಡದ ಉಸ್ತುವಾರಿ), ದೀಪಕ್‌, ಅಮಿತ್‌, ಮಾಚಯ್ಯ, ಕೆ.ಕಿರಣ್‌, (ಕುಳಿತವರು) ಭೂಷನ್‌, ಸುಮಿತ್‌ ಪಾಲ್‌, ಅಲಿಶಾನ್‌, ಮಣಿ, ಕವ್ರೆತಿ, ಪ್ರಭು ಸಹಾಯ್‌, ಜೇಮ್ಸ್‌, ರಾಕೇಶ್‌, ಸಂಜೀತ್‌– ಪ್ರಜಾವಾಣಿ ಚಿತ್ರ
ಪ್ರಶಸ್ತಿ ಗೆದ್ದ ಸದರ್ನ್‌ ಕಮಾಂಡ್‌ ತಂಡ (ನಿಂತವರು– ಎಡದಿಂದ) ಕಿರಣ್‌ ಎಸ್‌, ಬೋಪಣ್ಣ, ಪಳನಿ, ಸಾದಿಕ್‌, ಅಜಿತ್‌, ಆಶಿಶ್‌ (ಕೋಚ್‌), ಸುಬೇದಾರ್‌ ಮೇಜರ್‌ ಸೈನಿ, ಪೊನ್ನಪ್ಪ (ಕೋಚ್‌), ಸುದೀಶ್‌ (ಕೋಚ್‌), ಪಾರ್ಥಿಬ್‌ (ತಂಡದ ಉಸ್ತುವಾರಿ), ದೀಪಕ್‌, ಅಮಿತ್‌, ಮಾಚಯ್ಯ, ಕೆ.ಕಿರಣ್‌, (ಕುಳಿತವರು) ಭೂಷನ್‌, ಸುಮಿತ್‌ ಪಾಲ್‌, ಅಲಿಶಾನ್‌, ಮಣಿ, ಕವ್ರೆತಿ, ಪ್ರಭು ಸಹಾಯ್‌, ಜೇಮ್ಸ್‌, ರಾಕೇಶ್‌, ಸಂಜೀತ್‌– ಪ್ರಜಾವಾಣಿ ಚಿತ್ರ   

ಬೆಂಗಳೂರು: ಸದರ್ನ್‌ ಕಮಾಂಡ್‌ ತಂಡವು ಕೆ.ಎಂ.ಕಾರ್ಯಪ್ಪ ಸ್ಮಾರಕ ರಾಜ್ಯಮಟ್ಟದ ಹಾಕಿ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿತು. ಕೆ.ಎಂ.ಕಾರ್ಯಪ್ಪ ಹಾಕಿ ಅರೇನಾದಲ್ಲಿ ಭಾನುವಾರ ನಡೆದ ಫೈನಲ್‌ ಹಣಾಹಣಿಯಲ್ಲಿ ಆ ತಂಡವು 2–1ರಿಂದ ಭಾರತ ಕ್ರೀಡಾ ಪ್ರಾಧಿಕಾರ (ಸಾಯ್‌) ತಂಡವನ್ನು ಸೋಲಿಸಿತು.

ವಿಜೇತ ತಂಡದ ಪರ ಎಂ.ಡಿ. ಅಲಿಶಾನ್‌ 8ನೇ ನಿಮಿಷದಲ್ಲಿ ಗೋಲು ದಾಖಲಿಸಿದರು. ಮಣಿ ಸಿಂಗ್‌ 32ನೇ ನಿಮಿಷ ಗೋಲು ಹೊಡೆದು ಗೆಲುವಿನಲ್ಲಿ ಕಾಣಿಕೆ ನೀಡಿದರು. ಸೋತ ಸಾಯ್‌ ತಂಡದ ಏಕೈಕ ಗೋಲು ಮೊಹಮ್ಮದ್‌ ರಾಹೀಲ್‌ ಮೂಲಕ ಬಂತು. ಟ್ರೋಫಿ ಗೆದ್ದ ತಂಡವು ₹ 40,000 ಜೇಬಿಗಿಳಿಸಿದರೆ, ರನ್ನರ್‌ಅಪ್‌ ಸಾಯ್‌ ₹ 30,000 ಪಡೆಯಿತು.

ಸದರ್ನ್‌ ಕಮಾಂಡ್‌ ತಂಡದ ಎಂ.ಡಿ.ಅಲಿಶಾನ್‌ ಟೂರ್ನಿಯ ಶ್ರೇಷ್ಠ ಆಟಗಾರ ಎನಿಸಿಕೊಂಡರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.