ನವದೆಹಲಿ: ಭಾರತ ಮಹಿಳಾ ಹಾಕಿ ತಂಡ ಪ್ಯಾರಿಸ್ ಒಲಿಂಪಿಕ್ಸ್ಗೆ ಅರ್ಹತೆ ಗಳಿಸುವಲ್ಲಿ ವಿಫಲವಾಯಿತು. ಆ ಸೋಲಿನ ಗುಂಗಿನಿಂದ ಹೊರ ಬರಲು ಸಾಧ್ಯವಾಗುತ್ತಿಲ್ಲ ಎಂದು ಹಾಕಿ ತಂಡದ ನಾಯಕಿ ಸವಿತಾ ಪೂನಿಯಾ ಹೇಳಿದರು.
‘ಜೀವನದಲ್ಲಿ ಒಳ್ಳೆಯ ಕ್ಷಣಗಳನ್ನು ಮರೆಯಲಾಗುವುದಿಲ್ಲ. ಆದರೆ, ಕೆಟ್ಟ ಕ್ಷಣಗಳನ್ನು ಮರೆಯಲಾಗುವುದಿಲ್ಲ. ಒಲಿಂಪಿಕ್ ಅರ್ಹತಾ ಪಂದ್ಯಗಳಲ್ಲಿ ಸೋಲುವುದು ಎಷ್ಟು ಕೆಟ್ಟ ಕ್ಷಣವೆಂದರೆ ಬಹುಶಃ ನಮ್ಮ ಇಡೀ ಜೀವನವನ್ನು ಮರೆಯಲು ಸಾಧ್ಯವಾಗುವುದಿಲ್ಲ’ ಎಂದು 33 ವರ್ಷದ ಗೋಲ್ಕೀಪರ್ ಸವಿತಾ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
‘ನಾನು ಅದರ ಬಗ್ಗೆ ಮಾತನಾಡಲು ಬಯಸಲಿಲ್ಲ. ಏಕೆಂದರೆ ಅದು ಇನ್ನೂ ತುಂಬಾ ನೋವುಂಟು ಮಾಡುತ್ತದೆ. ನಾವು ಒಲಿಂಪಿಕ್ಸ್ ಗೆ ಹೋಗುತ್ತಿಲ್ಲ ಎಂಬುದನ್ನು ಇನ್ನೂ ನಂಬಲು ಸಾಧ್ಯವಿಲ್ಲ. ಆತ್ಮವಿಶ್ವಾಸ ಮತ್ತು ಉತ್ತಮವಾಗಿ ಸಿದ್ಧರಾಗಿದ್ದೆವು. ಆದರೆ, ಕ್ರೀಡೆಯಲ್ಲಿ ಏನನ್ನೂ ಊಹಿಸಲು ಸಾಧ್ಯವಿಲ್ಲ’ ಎಂದರು.
‘ಅರ್ಹತಾ ಪಂದ್ಯಗಳ ನಂತರ, ನಾವು ಒಂದು ವಾರ ಮನೆಯಲ್ಲಿದ್ದೆವು. ದುಃಖವನ್ನು ಒಳಗೆ ಇಡುವುದರಿಂದ ಯಾವುದೇ ಪ್ರಯೋಜನವಿಲ್ಲ ಮತ್ತು ಅದನ್ನು ಹೊರಹಾಕುವುದು ಅವಶ್ಯಕ. ಈ ವಿರಾಮದ ಸಮಯದಲ್ಲಿ ಯಾರೂ ಒಲಿಂಪಿಕ್ ಅರ್ಹತಾ ಪಂದ್ಯಗಳ ಬಗ್ಗೆ ಮಾತನಾಡಲಿಲ್ಲ’ ಎಂದು ಅವರು ಬಹಿರಂಗಪಡಿಸಿದರು.
‘ಕ್ರೀಡೆಯ ಬಗ್ಗೆ ಒಳ್ಳೆಯ ವಿಷಯವೆಂದರೆ ಹಿಂದಿನದನ್ನು ಮರೆತು ಬಹಳ ವೇಗವಾಗಿ ಮುಂದುವರಿಯಬೇಕು. ಅದಕ್ಕಾಗಿಯೇ ನಾನು ಸೀನಿಯರ್ ನ್ಯಾಷನಲ್ಸ್ ಆಡಲು ಪುಣೆಗೆ ಬಂದಿದ್ದೇನೆ. ಏಕೆಂದರೆ ಹಾಕಿ ನನ್ನ ಉತ್ಸಾಹವಾಗಿದೆ. ನಾನು ಮೈದಾನದಿಂದ ಹೆಚ್ಚು ದೂರವಿದ್ದರೆ ಅದು ನನಗೆ ಹೆಚ್ಚು ತೊಂದರೆ ನೀಡುತ್ತದೆ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.