ADVERTISEMENT

ಕಬಡ್ಡಿ: ಆಯ್ಕೆ ಟ್ರಯಲ್ಸ್‌ 6ರಿಂದ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2021, 20:50 IST
Last Updated 1 ಮಾರ್ಚ್ 2021, 20:50 IST

ಬೆಂಗಳೂರು: ತೆಲಂಗಾಣದಲ್ಲಿ ಇದೇ ತಿಂಗಳಲ್ಲಿ ನಡೆಯಲಿರುವ ಬಾಲಕ ಮತ್ತು ಬಾಲಕಿಯರ ರಾಷ್ಟ್ರೀಯ ಜೂನಿಯರ್ ಕಬಡ್ಡಿ ಚಾಂಪಿಯನ್‌ಷಿಪ್‌ಗೆ ರಾಜ್ಯ ತಂಡಗಳ ಆಯ್ಕೆ ಶಿಬಿರ ಇದೇ ಆರು ಮತ್ತು ಏಳರಂದು ನಗರದ ಕೆ.ಆರ್‌.ಪುರದ ಹೂಡಿಯಲ್ಲಿ ನಡೆಯಲಿದೆ.

ರಾಜ್ಯ ತಂಡಕ್ಕೆ ಆಯ್ಕೆಯಾದವರಿಗೆ ಎಂಟರಿಂದ ತರಬೇತಿ ಶಿಬಿರ ನಡೆಯಲಿದೆ ಎಂದು ರಾಜ್ಯ ಕಬಡ್ಡಿ ಸಂಸ್ಥೆಯ ಆಡಳಿತಾಧಿಕಾರಿ ತಿಳಿಸಿದ್ದಾರೆ.

ಆಯ್ಕೆಗೆ ಬರುವ ಬಾಲಕರ ತೂಕ 70 ಕೆಜಿ ಒಳಗೆ ಮತ್ತು ಬಾಲಕಿಯರ ತೂಕ 65 ಕೆಜಿ ಒಳಗೆ ಇದ್ದು 2001ರ ಮಾರ್ಚ್ 26ರ ನಂತರ ಜನಿಸಿದವರಾಗಿರಬೇಕು. ಆಧಾರ್ ಕಾರ್ಡ್‌ನ ಮೂಲ ಪ್ರತಿ, ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ ಅಥವಾ ಜನನ ಪ್ರಮಾಣ ಪತ್ರ ಹಾಗೂ ಪಾಸ್‌ಪೋರ್ಟ್ ಅಳತೆಯ ನಾಲ್ಕು ಭಾವಚಿತ್ರಗಳನ್ನು ತೆಗೆದುಕೊಂಡು ಬರಬೇಕು.

ADVERTISEMENT

ಜಿಲ್ಲಾ ಘಟಕಗಳ ಮೂಲಕ ಬರುವ ಪ್ರತಿಯೊಬ್ಬರಿಗೂ ವಸತಿ, ಊಟ ಮತ್ತು ಒಂದು ಬದಿಯ ಪ್ರಯಾಣಭತ್ಯೆ ನೀಡಲಾಗುವುದು. ಕಬಡ್ಡಿಪಟುಗಳು ಜಿಲ್ಲಾ ಘಟಕಗಳ ಸಮವಸ್ತ್ರದೊಂದಿಗೆ ಬರಬೇಕಾಗಿದ್ದು ಮ್ಯಾಟ್ ಶೂಗಳನ್ನು ತೆಗೆದುಕೊಂಡು ಬರಬೇಕು ಎಂದು ತಿಳಿಸಲಾಗಿದೆ.

ಮಾಹಿತಿಗೆ ಯಲ್ಲಪ್ಪ (9481512563) ಅಥವಾ ಪ್ರಭು (9916167866) ಅವರನ್ನು ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.