ಬೆಂಗಳೂರು: ಕರ್ನಾಟಕದ ವನಿತೆಯರ ತಂಡವು ಕೇರಳದ ಕೊಚ್ಚಿಯಲ್ಲಿ ನಡೆದ 23 ವರ್ಷದೊಳಗಿನವರ 3x3 ರಾಷ್ಟ್ರೀಯ ಬ್ಯಾಸ್ಕೆಟ್ಬಾಲ್ ಚಾಂಪಿಯನ್ಷಿಪ್ನಲ್ಲಿ ರನ್ನರ್ಸ್ ಅಪ್ ಆಗಿದ್ದು, ₹2 ಲಕ್ಷ ಬಹುಮಾನ ತನ್ನದಾಗಿಸಿಕೊಂಡಿದೆ.
ಕರ್ನಾಟಕ ತಂಡವು ಶನಿವಾರ ನಡೆದ ಫೈನಲ್ನಲ್ಲಿ 11–19ರಿಂದ ಆತಿಥೇಯ ಕೇರಳ ತಂಡಕ್ಕೆ ಮಣಿಯಿತು.
ಸೆಮಿಫೈನಲ್ನಲ್ಲಿ ಕರ್ನಾಟಕ ತಂಡವು 21–19ರಿಂದ ಮಧ್ಯಪ್ರದೇಶ ವಿರುದ್ಧ; ಕ್ವಾರ್ಟರ್ ಫೈನಲ್ನಲ್ಲಿ 21–18ರಿಂದ ತಮಿಳುನಾಡು ವಿರುದ್ಧ; ಪ್ರಿ ಕ್ವಾರ್ಟರ್ ಫೈನಲ್ನಲ್ಲಿ 21–15ರಿಂದ ಪಂಜಾಬ್ ವಿರುದ್ಧ ಗೆಲುವು ಸಾಧಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.