ಬ್ಯಾಸ್ಕೆಟ್ಬಾಲ್
ಬೆಂಗಳೂರು: ಕುಶಾಲ್ ಸಿಂಗ್ ಎಂ. ಮತ್ತು ಅದಿತಿ ಎಸ್. ಅವರು ಪುದುಚೇರಿಯಲ್ಲಿ ಇದೇ 9ರಿಂದ 16ರವರೆಗೆ ನಡೆಯಲಿರುವ 40ನೇ ಯುವ ರಾಷ್ಟ್ರೀಯ ಬ್ಯಾಸ್ಕೆಟ್ಬಾಲ್ ಚಾಂಪಿಯನ್ಷಿಪ್ನಲ್ಲಿ ಕ್ರಮವಾಗಿ ಕರ್ನಾಟಕ ತಂಡಗಳನ್ನು ಮುನ್ನಡೆಸಲಿದ್ದಾರೆ.
ರಾಜ್ಯ ಯುವ ಬಾಲಕ ಮತ್ತು ಬಾಲಕಿಯರ ತಂಡಗಳನ್ನು ಕರ್ನಾಟಕ ರಾಜ್ಯ ಬ್ಯಾಸ್ಕೆಟ್ಬಾಲ್ ಸಂಸ್ಥೆಯು ಪ್ರಕಟಿಸಿದೆ.
ಬಾಲಕರ ತಂಡ: ಕುಶಾಲ್ ಸಿಂಗ್ ಎಂ (ನಾಯಕ), ಆಶೆರ್ ಡಿಸೋಜ, ಸಂವೇಹ್ ರಾಥೋಡ್, ಅಕ್ಷತ್ ಎ, ವಸಿಷ್ಠ ಪ್ರಸನ್ನ, ಅದ್ವಿತ್ ಆನಂದ್, ರಿಶ್ತಿಹ್ ಬಸುರಾಯ್, ಅವ್ಯಂ ಗುಪ್ತಾ, ದಿವಿತ್ ವಿ. ಶೇಣವ, ಚತುರ ಎಂ. ಸಚು, ಕ್ರಿಶ್ ಬಿಷ್ಣೋಯಿ, ಉಜ್ವಲ್ ಜಾಧವ್ ಕೆ. ಕೋಚ್: ಪ್ರಮೋದ ಎಸ್.ಕೆ, ಮ್ಯಾನೇಜರ್: ಶ್ರೀನಿವಾಸ ಮೂರ್ತಿ ಎಚ್.
ಬಾಲಕಿಯರ ತಂಡ: ಅದಿತಿ ಎಸ್. (ನಾಯಕಿ) ಶೀತಲ್ ಎಂ.ಆರ್, ನಿರೀಕ್ಷಾ ಬಿ.ಸಿ, ಸ್ವಾತಿ ಪ್ರಭು, ಮಹೇಕ್ ಶರ್ಮಾ, ಶ್ರೀಶಾ ಎನ್, ಆಂಚಲ್ ಪಿ. ಸೀರ್ವಿ, ಅವನಿ ಮರ್ದಾ, ಅನ್ವಿತಾ ಸಣ್ಣರ್, ಶ್ರಾವಣಿ ಶಿವಣ್ಣ, ಹನೀಶಾ ಶಿಂಧೆ, ಶಿವಬಾಯಿ ಸಿ. ಮಠ, ಕೋಚ್: ಸತ್ಯನಾರಾಯಣ ಕೆ, ಮ್ಯಾನೇಜರ್: ಭಾವನಾ ಆರ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.