ಮೈಸೂರು: ಬೆಳಗಾವಿ ವಲಯದ ಶಿವಯ್ಯ ಪೂಜಾರಿ ಮತ್ತು ಬೆಂಗಳೂರು ಗ್ರಾಮಾಂತರ ವಿಭಾಗದ ಮಧುಸೂದನ್ ಅವರು ದಸರಾ ಅಂಗವಾಗಿ ಆಯೋಜಿಸಿರುವ ರಾಜ್ಯಮಟ್ಟದ ಗ್ರೀಕೊ ರೋಮನ್ ಕುಸ್ತಿ ಸ್ಪರ್ಧೆಯಲ್ಲಿ ಕ್ರಮವಾಗಿ 97 ಕೆ.ಜಿ. ಮತ್ತು 87 ಕೆ.ಜಿ. ವಿಭಾಗಗಳಲ್ಲಿ ಅಗ್ರಸ್ಥಾನ ಪಡೆದುಕೊಂಡರು.
ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಸ್ಪರ್ಧೆಯಲ್ಲಿ ಶಿವಯ್ಯ ಅವರು ಬೆಂಗಳೂರು ಗ್ರಾಮಾಂತರ ವಿಭಾಗದ ಎನ್.ಕೆಂಚಪ್ಪ ವಿರುದ್ಧ ಗೆದ್ದರು.
ಫಲಿತಾಂಶ ಹೀಗಿದೆ: 55 ಕೆ.ಜಿ. ವಿಭಾಗ: ಎಸ್.ಪ್ರತೀಕ್ (ಬೆಂಗಳೂರು ಗ್ರಾಮಾಂತರ ವಿಭಾಗ)–1, ರೂಪೇಶ್ ಕೆ. (ಬೆಳಗಾವಿ ವಿಭಾಗ)–2, ಅಜಿತ್ ಆರ್.ಚೌಗುಲೆ (ಬೆಳಗಾವಿ ವಿಭಾಗ)–3.
60 ಕೆ.ಜಿ. ವಿಭಾಗ: ಪ್ರಭಾಕರ್ ಎಂ. (ಬೆಂಗಳೂರು ಗ್ರಾಮಾಂತರ)–1, ಶಿವಪ್ಪ ಜಂಬಗಿ (ಬೆಳಗಾವಿ)–2, ರಾಮಣ್ಣ ಕೆ. (ಬೆಳಗಾವಿ)–3.
63 ಕೆ.ಜಿ.ವಿಭಾಗ: ಈಶ್ವರ್ ಎಸ್.ಡಂಗಿ (ಬೆಳಗಾವಿ)–1, ಜ್ಯೋತಿಬಾ ಪಿ.ಜಾಂಬರೆ (ಬೆಳಗಾವಿ)–2, ಎ.ರಂಗನಾಥ್ (ಬೆಂಗಳೂರು ಗ್ರಾಮಾಂತರ)–3.
67 ಕೆ.ಜಿ.ವಿಭಾಗ: ಹುಚ್ಚಪ್ಪ ಆರ್.ಜಿದ್ದಿಮನಿ (ಬೆಂಗಳೂರು ಗ್ರಾಮಾಂತರ)–1, ಮರಿಯಪ್ಪ (ಬೆಂಗಳೂರು ಗ್ರಾಮಾಂತರ)–2, ಶ್ರಾವಣ್ ಹಾದಿಮನಿ (ಬೆಳಗಾವಿ)–3.
72 ಕೆ.ಜಿ.ವಿಭಾಗ: ಶಿವಾನಂದ ಎಸ್.ಬಂಗಿ (ಬೆಳಗಾವಿ)–1, ಇ.ಸಂಜಯ್ (ಬೆಂಗಳೂರು ಗ್ರಾಮಾಂತರ)–2, ಪ್ರವೀಣ್ ಎಚ್. (ಕಲಬುರ್ಗಿ)–3.
77 ಕೆ.ಜಿ. ವಿಭಾಗ: ಪರಮಾನಂದ್ ಬಿ. (ಬೆಳಗಾವಿ)–1, ಲಕ್ಷ್ಮಣ್ ಬಿ. ಸವಳಗಿ (ಬೆಂಗಳೂರು ಗ್ರಾಮಾಂತರ)–2, ಮುಬಾರಕ್ ಎನ್.ಎ (ಬೆಳಗಾವಿ)–3.
82 ಕೆ.ಜಿ. ವಿಭಾಗ: ಪಂಕಜ್ ಕುಮಾರ್ (ಬೆಂಗಳೂರು ಗ್ರಾಮಾಂತರ)–1, ಗೋಪಾಲ್ ಟಿ. (ಬೆಳಗಾವಿ)–2, ಹಣಮಂತ (ಬೆಂಗಳೂರು ಗ್ರಾಮಾಂತರ)–3.
87 ಕೆ.ಜಿ. ವಿಭಾಗ: ಆನಂದ್ (ಬೆಂಗಳೂರು ಗ್ರಾಮಾಂತರ)–1, ಹುಸೇನ್ ಮುಲ್ಲಾ (ಬೆಳಗಾವಿ)–2, ಆದಿತ್ಯ ಬಿ. (ಬೆಳಗಾವಿ)–3.
97 ಕೆ.ಜಿ. ವಿಭಾಗ: ಶಿವಯ್ಯ ಪೂಜಾರಿ (ಬೆಳಗಾವಿ)–1, ಎನ್.ಕೆಂಚಪ್ಪ (ಬೆಂಗಳೂರು ಗ್ರಾಮಾಂತರ)–2, ಎಂ.ಎಸ್.ಸ್ವರೂಪ್ (ಬೆಂಗಳೂರು ಗ್ರಾಮಾಂತರ)–3.
97 ರಿಂದ 130 ಕೆ.ಜಿ. ವಿಭಾಗ: ಮಧುಸೂದನ್ (ಬೆಂಗಳೂರು ಗ್ರಾಮಾಂತರ)–1, ಶ್ರೀಶೈಲ (ಬೆಂಗಳೂರು ಗ್ರಾಮಾಂತರ)–2, ಬೀರೇಶ್ (ಬೆಳಗಾವಿ)–3.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.