ADVERTISEMENT

ಅಮರನಾಥ ಯಾತ್ರೆ ಪೂರ್ಣಗೊಳಿಸಿದ ಬ್ಯಾಡ್ಮಿಂಟನ್ ಪಟು ಸೈನಾ ನೆಹವಾಲ್‌

ಪಿಟಿಐ
Published 13 ಜುಲೈ 2023, 6:15 IST
Last Updated 13 ಜುಲೈ 2023, 6:15 IST
   

ನವದೆಹಲಿ: ಉತ್ತರ ಭಾರತದ ಪ್ರತಿಕೂಲ ಹವಾಮಾನದಿಂದಾಗಿ ಹಲವು ಬಾರಿ ರದ್ದುಗೊಂಡಿದ್ದ ಅಮರನಾಥ ಯಾತ್ರೆ ಮರು ಆರಂಭಗೊಂಡಿದ್ದು, ಬ್ಯಾಡ್ಮಿಂಟನ್ ತಾರೆ ಸೈನಾ ನೆಹವಾಲ್ ಅಮರನಾಥ ಯಾತ್ರೆ ಪೂರ್ಣಗೊಳಿಸಿದ್ದಾರೆ.

ತಮ್ಮ ತಾಯಿಯೊಂದಿಗೆ ಯಾತ್ರೆ ಕೈಗೊಂಡಿದ್ದ ಸೈನಾ, ಪ್ರತಿಕೂಲ ಪರಿಸ್ಥಿತಿಯಲ್ಲೂ ಯಾತ್ರೆ ಸಂಪನ್ನಗೊಂಡಿದ್ದಕ್ಕೆ ಮತ್ತು ಅದನ್ನು ಸಾಕಾರಗೊಳಿಸಿದವರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

ತಮ್ಮ ಯಾತ್ರೆ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸೈನಾ, ‘ಈ ಯಾತ್ರೆ ಸಾಕಾರಗೊಳ್ಳಲು ಸರ್ಕಾರದ ಸಾಕಷ್ಟು ನೆರವಾಯಿತು. ದೆವಾಲಯ ಮಂಡಳಿಯೂ ನಮಗೆ ದರ್ಶನ ಮಾಡಿಸಲು ಸಹಕರಿಸಿತು. ದೇವರ ದರ್ಶನದಿಂದ ಪುನೀತನಾಗಿದ್ದೇನೆ. ತಾಯಿಯೊಂದಿಗೆ ಈ ಯಾತ್ರೆ ಸಂಪನ್ನಗೊಂಡಿದ್ದು ಸಂತೃಪ್ತಿ ತಂದಿದೆ’ ಎಂದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.