ADVERTISEMENT

ಅಟ್ಯಾಪಟ್ಯಾ: ಭಾರತ ತಂಡಕ್ಕೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2019, 20:29 IST
Last Updated 3 ಏಪ್ರಿಲ್ 2019, 20:29 IST
ಭೂತಾನ್‌ನಲ್ಲಿ ನಡೆದ ಸೌತ್‌ ಏಷ್ಯನ್‌ ಅಟ್ಯಾಪಟ್ಯಾ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದ ಭಾರತ ತಂಡದಲ್ಲಿದ್ದ ಕರ್ನಾಟಕ ಸ್ಪರ್ಧಿಗಳು. ಎಡದಿಂದ; ಸಂಪತ್‌ ಯರಗಟ್ಟಿ, ಸಂತೋಷ ನಾಯಕ, ಡಾ. ವಿ.ಡಿ. ಪಾಟೀಲ (ಪುರುಷರ ತಂಡದ ಕೋಚ್‌), ಅನಿತಾ ಚಿಚಗಟ್ಟಿ, ಭೀಮವ್ವ ಪೂಜಾರ
ಭೂತಾನ್‌ನಲ್ಲಿ ನಡೆದ ಸೌತ್‌ ಏಷ್ಯನ್‌ ಅಟ್ಯಾಪಟ್ಯಾ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದ ಭಾರತ ತಂಡದಲ್ಲಿದ್ದ ಕರ್ನಾಟಕ ಸ್ಪರ್ಧಿಗಳು. ಎಡದಿಂದ; ಸಂಪತ್‌ ಯರಗಟ್ಟಿ, ಸಂತೋಷ ನಾಯಕ, ಡಾ. ವಿ.ಡಿ. ಪಾಟೀಲ (ಪುರುಷರ ತಂಡದ ಕೋಚ್‌), ಅನಿತಾ ಚಿಚಗಟ್ಟಿ, ಭೀಮವ್ವ ಪೂಜಾರ   

ಹುಬ್ಬಳ್ಳಿ:ಭಾರತದ ಪುರುಷರ ಮತ್ತು ಮಹಿಳೆಯರ ತಂಡಗಳು ಇತ್ತೀಚಿಗೆ ಭೂತಾನ್‌ನ ಮಸ್ಸೆಯಲ್ಲಿ ನಡೆದ ಐದನೇಸೌತ್‌ ಏಷ್ಯನ್‌ ಅಟ್ಯಾಪಟ್ಯಾ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದುಕೊಂಡಿವೆ.

ಭಾರತ, ಭೂತಾನ್‌, ನೇಪಾಳ, ಬಾಂಗ್ಲಾದೇಶ, ಶ್ರೀಲಂಕಾ ಮತ್ತು ಮ್ಯಾನ್ಮಾರ್ ದೇಶಗಳು ಚಾಂಪಿಯನ್‌ಷಿಪ್‌ನಲ್ಲಿಪಾಲ್ಗೊಂಡಿದ್ದವು. ಭಾರತದ ಪುರುಷರ ತಂಡ ಫೈನಲ್‌ನಲ್ಲಿ 35–20, 30–15ರಲ್ಲಿ ಭೂತಾನ್‌ ತಂಡವನ್ನು ಸೋಲಿಸಿತು.

ಭಾರತ ತಂಡದಲ್ಲಿ ಗದಗ ಜಿಲ್ಲೆಯ ಮುಂಡರಗಿ ತಾಲ್ಲೂಕಿನದಿಂಡೂರು ತಾಂಡಾದಸಂತೋಷ ನಾಯ್ಕ ಮತ್ತು ಚಂದರಗಿ ಕ್ರೀಡಾಶಾಲೆಯಸಂಪತ್‌ ಯರಗಟ್ಟಿ ಇದ್ದರು. ಸಂಪತ್ ಬೆಳಗಾವಿ ಜಿಲ್ಲೆಯ ಸಾಲಹಳ್ಳಿಯವರು. ಕರ್ನಾಟಕ ಅಟ್ಯಾಪಟ್ಯಾ ಸಂಸ್ಥೆಯ ಗೌರವ ಕಾರ್ಯದರ್ಶಿಡಾ. ವಿ.ಡಿ. ಪಾಟೀಲ ಪುರುಷರ ತಂಡಕ್ಕೆ ತರಬೇತುದಾರರಾಗಿದ್ದರು.

ADVERTISEMENT

ಭಾರತ ಮಹಿಳಾ ತಂಡ ಪ್ರಶಸ್ತಿ ಸುತ್ತಿನ ಹೋರಾಟದಲ್ಲಿ 25–16, 22–12ರಲ್ಲಿ ಭೂತಾನ್‌ ಎದುರು ಗೆಲುವು ಸಾಧಿಸಿ ಚಾಂಪಿಯನ್‌ ಎನಿಸಿತು.

ಈ ತಂಡವನ್ನುಹುಬ್ಬಳ್ಳಿಯಅನಿತಾ ಬಿಚಗಟ್ಟಿ ಮುನ್ನಡೆಸಿದ್ದರು. ಗಜೇಂದ್ರಗಡತಾಲ್ಲೂಕಿನ ಜಕ್ಕಲಿ ಗ್ರಾಮದಭೀಮವ್ವ ಪೂಜಾರ ಕೂಡ ತಂಡದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.