ADVERTISEMENT

ಕೆಂಗುಂಟೆಯಲ್ಲಿ ಕ್ರೀಡಾಕೂಟ ಸಂಭ್ರಮ

ವಿವಿಧ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಭಾಗಿ l ವಿಜೇತರಿಗೆ ಬಹುಮಾನ

​ಪ್ರಜಾವಾಣಿ ವಾರ್ತೆ
Published 26 ಜನವರಿ 2023, 19:33 IST
Last Updated 26 ಜನವರಿ 2023, 19:33 IST
ಮಲ್ಲತ್ತಹಳ್ಳಿ ಸಮೀಪದ ಕೆಂಗುಂಟೆ ಕನ್ಯಾಕುಮಾರಿ ಶಾಲಾ ಮೈದಾನದಲ್ಲಿ ಹಮ್ಮಿಕೊಂಡಿದ್ದ ಕ್ರೀಡಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಡಾ.ಎಚ್.ತುಕಾರಾಂ ಬಹುಮಾನ ವಿತರಿಸಿದರು. ಲಲಿತಾ ರುದ್ರಸ್ವಾಮಿ, ಪುಟ್ಟಮ್ಮ, ಸುವರ್ಣ ತುಕಾರಾಂ, ರಾಮಮೂರ್ತಿ ಇದ್ದರು.
ಮಲ್ಲತ್ತಹಳ್ಳಿ ಸಮೀಪದ ಕೆಂಗುಂಟೆ ಕನ್ಯಾಕುಮಾರಿ ಶಾಲಾ ಮೈದಾನದಲ್ಲಿ ಹಮ್ಮಿಕೊಂಡಿದ್ದ ಕ್ರೀಡಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಡಾ.ಎಚ್.ತುಕಾರಾಂ ಬಹುಮಾನ ವಿತರಿಸಿದರು. ಲಲಿತಾ ರುದ್ರಸ್ವಾಮಿ, ಪುಟ್ಟಮ್ಮ, ಸುವರ್ಣ ತುಕಾರಾಂ, ರಾಮಮೂರ್ತಿ ಇದ್ದರು.   

ರಾಜರಾಜೇಶ್ವರಿನಗರ: ಮಲ್ಲತ್ತಹಳ್ಳಿ ಸಮೀಪದ ಕೆಂಗುಂಟೆ ಕನ್ಯಾಕುಮಾರಿ ಶಾಲಾ ಮೈದಾನದಲ್ಲಿ ಎಲ್ಲ ವಯಸ್ಸಿನವರಿಗೆ ಕ್ರೀಡಾಕೂಟ ಆಯೋಜಿಸಲಾಗಿತ್ತು.

ಪುರುಷರ ವಿಭಾಗದಲ್ಲಿ ಥ್ರೋ ಬಾಲ್, ಮ್ಯೂಸಿಕಲ್ ಚೇರ್, ಶಾಟ್‍ಪಟ್, ಗೋಣಿಚೀಲದ ಓಟ, ಬಕೆಟ್‍ಗೆ ಬಾಲ್‍ ಹಾಕುವುದು, ಮಹಿಳೆಯರ ವಿಭಾಗದಲ್ಲಿ ಥ್ರೋಬಾಲ್, ಶಾಟ್‌ಪಟ್, ಲೆಮನ್ ಅಂಡ್ ಸ್ಪೂನ್, ಕೆರೆ ದಡ, ಮ್ಯೂಸಿಕಲ್ ಚೇರ್ ಹಮ್ಮಿಕೊಳ್ಳಲಾಗಿತ್ತು. ಕಿರಿಯ, ಹಿರಿಯ ಸೇರಿ 560, ವಿವಿಧ ಶಾಲಾ-ಕಾಲೇಜುಗಳ 210 ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದರು.

ನಾಲ್ವಡಿ ಕೃಷ್ಣರಾಜ ಒಡೆಯರ್ ಪಾರ್ಕ್‍ನ ಕಾಂಗ್ರೆಸ್ ಅಧ್ಯಕ್ಷ ಡಾ.ಎಚ್. ತುಕಾರಾಂ ಬಹುಮಾನ ವಿತರಿಸಿದರು.

ADVERTISEMENT

ಕನ್ಯಾಕುಮಾರಿ ಶಾಲೆಯ ಮುಖ್ಯಸ್ಥರಾದ ಸಿ.ಪಿ.ಸುವರ್ಣ ತುಕಾರಾಂ, ಕಾಂಗ್ರೆಸ್ ನಾಯಕಿ ಕಾವ್ಯಾ ರಘುಗೌಡ, ಕಾರ್ಮಿಕ ವಿಭಾಗದ ಅಧ್ಯಕ್ಷ ಕೆಂಪರಾಜು, ಪರಿಶಿಷ್ಟ ವಿಭಾಗದ ಕಾಂಗ್ರೆಸ್ ಅಧ್ಯಕ್ಷ ಪರುಶುರಾಮ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲಲಿತಾ ರುದ್ರಸ್ವಾಮಿ, ಮುಖಂಡರಾದ ಭದ್ರೇಗೌಡ, ಪುಟ್ಟಮ್ಮ, ರಾಮಮೂರ್ತಿ, ಸುಹಾಸ್, ನಿರಂಜನ, ಸುಮ, ಗೀತಾಂಜಲಿ, ಚಂದ್ರಿಕಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.