ಮೈಸೂರು: ಬೆಳಗಾವಿಯ ತನಿಷ್ಕಾ ಕಪಿಲ್ ಕಾಲಭೈರವ ಹಾಗೂ ಬೆಂಗಳೂರಿನ ಎಂ. ತಮೋಘ್ನ ಅವರು ಇಲ್ಲಿ ನಡೆಯುತ್ತಿರುವ ರಾಜ್ಯ ರ್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ 15 ವರ್ಷದ ಒಳಗಿನ ಬಾಲಕಿಯರು ಹಾಗೂ ಬಾಲಕರ ವಿಭಾಗದ ಚಾಂಪಿಯನ್ ಆಗಿ ಹೊರಹೊಮ್ಮಿದರು.
ಮೈಸೂರು ಜಿಲ್ಲಾ ಟೇಬಲ್ ಟೆನಿಸ್ ಸಂಸ್ಥೆಯು ಮೈಸೂರು ವಿಶ್ವವಿದ್ಯಾಲಯದ ಜಿಮ್ನಾಷಿಯಂ ಹಾಲ್ನಲ್ಲಿ ಆಯೋಜಿಸಿರುವ ಟೂರ್ನಿಯಲ್ಲಿ ಶನಿವಾರ ನಡೆದ ಫೈನಲ್ ಹಣಾಹಣಿಯಲ್ಲಿ ತನಿಷ್ಕಾ, ರಾಶಿ ರಾವ್ ಎದುರು 6-11, 11-9, 11-9, 11-7ರಿಂದ ಸುಲಭದ ಗೆಲುವು ದಾಖಲಿಸಿದರು.
ಸೆಮಿಫೈನಲ್ಸ್ನಲ್ಲಿ ತನಿಷ್ಕಾ 11-5, 11-1, 11-8ರಿಂದ ಕ್ರಿಶಾ ಕರ್ಕೆರಾ ಅವರನ್ನು ಹಾಗೂ ರಾಶಿ 11-8, 11-6, 11–5ರಿಂದ ಸಾಕ್ಷ್ಯ ಸಂತೋಷ್ ಅವರನ್ನು ಪರಾಭವಗೊಳಿಸಿದರು.
ಬಾಲಕರ ವಿಭಾಗದ ಫೈನಲ್ನಲ್ಲಿ ತೀವ್ರ ಪೈಪೋಟಿ ಕಂಡುಬಂತು. ಅಂತಿಮವಾಗಿ ಎಂ. ತಮೋಘ್ನ 8-11, 11-7, 15-13, 1-11, 11-8ರಿಂದ ರೆಯಾಂಶ್ ಜಲನ್ ಅವರನ್ನು ಮಣಿಸಿದರು.
ಸೆಮಿಫೈನಲ್ಸ್ನಲ್ಲಿ ತಮೋಘ್ನ 5-11, 11-7, 11-8, 9-11, 11-7ರಿಂದ ವೇದಾಂತ್ ವಸಿಷ್ಟ ಅವರನ್ನು ಹಾಗೂ ರೆಯಾಂಶ್ 11 -4, 10-12, 13-15, 12-10, 11-2ರಿಂದ ಆದ್ಯೋತ್ ಎದುರು ಗೆಲುವು ದಾಖಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.