ಬೆಂಗಳೂರು: ಕರ್ನಾಟಕದ ಶೈನಾ ಮಣಿಮುತ್ತು ಮತ್ತು ಐಕ್ಯ ಶೆಟ್ಟಿ ಅವರು ನವೀ ಮುಂಬೈನಲ್ಲಿ ನಡೆದ ಅಖಿಲ ಭಾರತ ಸಬ್ಜೂನಿಯರ್ ರ್ಯಾಂಕಿಂಗ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದರು.
ಭಾನುವಾರ ಕೊನೆಗೊಂಡ ಟೂರ್ನಿಯ ಬಾಲಕಿಯರ ಡಬಲ್ಸ್ ಫೈನಲ್ನಲ್ಲಿ ಕರ್ನಾಟಕದ ಜೋಡಿಯು 21–14, 18–21, 21–19ರಿಂದ ತಮಿಳುನಾಡಿನ ಲಾಕ್ಷಾ ಎನ್.ಡಿ. ಮತ್ತು ದೀಕ್ಷಾ ಎಸ್.ಆರ್. ಅವರನ್ನು ಪರಾಭವಗೊಳಿಸಿದರು.
ಬಾಲಕರ ಸಿಂಗಲ್ಸ್ನಲ್ಲಿ ತೆಲಂಗಾಣದ ಶಶಾಂಕ್ ವನಮಾಲಾ 17-21, 21-17, 21-16ರಿಂದ ದೆಹಲಿಯ ರಿಯಾನ್ ಮಲ್ಹಾನ್ ಎದುರು ಗೆದ್ದರೆ, ಬಾಲಕಿಯರ ಸಿಂಗಲ್ಸ್ ವಿಭಾಗದಲ್ಲಿ ಒಡಿಶಾದ ತನ್ವಿ ಪತ್ರಿ11-21, 27-25, 21-13ರಿಂದ ತಮಿಳುನಾಡಿನದೀಕ್ಷಾ ಎದುರು ಗೆದ್ದು ಪ್ರಶಸ್ತಿ ಜಯಿಸಿದರು. ಬಾಲಕರ ಡಬಲ್ಸ್ನಲ್ಲಿ ಆಂಧ್ರಪ್ರದೇಶದ ಅಖಿಲ್ ರೆಡ್ಡಿ ಬೋಬಾ– ಅಭಿಷೇಕ್ ಬೋನು ಜೋಡಿಯು ಪ್ರಶಸ್ತಿಗೆ ಮುತ್ತಿಕ್ಕಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.