ADVERTISEMENT

ವ್ಹೀಲ್‌ಚೇರ್‌ ಫೆನ್ಸಿಂಗ್‌: ರಾಜ್ಯಕ್ಕೆ 3 ಪದಕ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2019, 18:41 IST
Last Updated 3 ಆಗಸ್ಟ್ 2019, 18:41 IST
ಕರ್ನಾಟಕ ವ್ಹೀಲ್‌ಚೇರ್‌ ಫೆನ್ಸಿಂಗ್ ತಂಡ ಕುಳಿತವರು (ಎಡದಿಂದ): ಪ್ರಶಾಂತ್ ಕುಮಾರ್‌, ತ್ಯಾಗರಾಜನ್‌, ರಾಘವೇಂದ್ರ, ಪೃಥ್ವಿರಾಜ್‌, (ನಿಂತಿರುವವರು) ತಿಪ್ಪಣ್ಣ, ಮ್ಯಾನೇಜರ್‌ಗಳಾದ ಮಣಿಶಂಕರ್, ಬಲರಾಂ, ಮುರಳಿ, ಗಿರೀಶ್‌, ವೆಂಕಟೇಶನ್‌
ಕರ್ನಾಟಕ ವ್ಹೀಲ್‌ಚೇರ್‌ ಫೆನ್ಸಿಂಗ್ ತಂಡ ಕುಳಿತವರು (ಎಡದಿಂದ): ಪ್ರಶಾಂತ್ ಕುಮಾರ್‌, ತ್ಯಾಗರಾಜನ್‌, ರಾಘವೇಂದ್ರ, ಪೃಥ್ವಿರಾಜ್‌, (ನಿಂತಿರುವವರು) ತಿಪ್ಪಣ್ಣ, ಮ್ಯಾನೇಜರ್‌ಗಳಾದ ಮಣಿಶಂಕರ್, ಬಲರಾಂ, ಮುರಳಿ, ಗಿರೀಶ್‌, ವೆಂಕಟೇಶನ್‌   

ಬೆಂಗಳೂರು: ಚೆನ್ನೈನಲ್ಲಿ ಈಚೆಗೆ ನಡೆದ ರಾಷ್ಟ್ರೀಯ ವ್ಹೀಲ್‌ಚೇರ್ ಫೆನ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿರಾಜ್ಯ ತಂಡದವರು ಮೂರು ಪದಕ ಗಳಿಸಿದರು.

ಚೆನ್ನೈನ ಜವಾಹರಲಾಲ್‌ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ನಡೆದಟೂರ್ನಿಯ ತಂಡ ಮತ್ತು ವೈಯಕ್ತಿಕ ವಿಭಾಗದ ಸ್ಪರ್ಧೆಗಳಲ್ಲಿ 20 ರಾಜ್ಯಗಳ 100ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದ್ದರು.

ಕರ್ನಾಟಕ ತಂಡ ಸೆಬರ್ ಮತ್ತು ಇಪ್ಪಿ ವಿಭಾಗದಲ್ಲಿ ಎರಡು ಕಂಚಿನ ಪದಕಗಳನ್ನು ಗೆದ್ದುಕೊಂಡಿತು. ರಾಘವೇಂದ್ರ, ತಿಮ್ಮಣ್ಣ, ಪ್ರಶಾಂತ್, ತ್ಯಾಗರಾಜನ್ ಹಾಗೂ ‘ಪ್ರಜಾವಾಣಿ’ ಉಪಸಂಪಾದಕ ಎಂ.ಎಚ್. ಪೃಥ್ವಿರಾಜ್‌ ರಾಜ್ಯ ತಂಡವನ್ನು ಪ್ರತಿನಿಧಿಸಿದ್ದರು. ವೈಯಕ್ತಿಕ ವಿಭಾಗದಲ್ಲಿ ತ್ಯಾಗರಾಜನ್ ಚಿನ್ನದ ಪದಕ ಗೆದ್ದುಕೊಂಡರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.