ADVERTISEMENT

ಕೆಟಿಪಿಪಿಎ–ಎಐಟಿಎ ಟೆನಿಸ್‌ ಟೂರ್ನಿ: ಸೆಮಿಗೆ ನಿಕ್ಷೇಪ್‌, ರಿಷಿ

ಭರತ್‌–ಉಮೈರ್‌ ಶಾಗೆ ಜಯ

​ಪ್ರಜಾವಾಣಿ ವಾರ್ತೆ
Published 16 ಜನವರಿ 2019, 18:05 IST
Last Updated 16 ಜನವರಿ 2019, 18:05 IST
ಬಿ.ಆರ್‌.ನಿಕ್ಷೇಪ್‌
ಬಿ.ಆರ್‌.ನಿಕ್ಷೇಪ್‌   

ಬೆಂಗಳೂರು:ಕರ್ನಾಟಕದ ಬಿ.ಆರ್.ನಿಕ್ಷೇ‍ಪ್‌ ಮತ್ತು ರಿಷಿ ರೆಡ್ಡಿ ಇಲ್ಲಿನ ಟೆಂಪಲ್ ಟೆನಿಸ್ ಕೋರ್ಟ್‌ನಲ್ಲಿ ನಡೆಯುತ್ತಿರುವ ಕೆಟಿಪಿಪಿಎ–ಎಐಟಿಎ ಟೆನಿಸ್‌ ಟೂರ್ನಿಯ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.

ಬುಧವಾರ ನಡೆದಪುರುಷರ ಸಿಂಗಲ್ಸ್‌ ವಿಭಾಗದ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಮೂರನೇ ಶ್ರೇಯಾಂಕಿತ ನಿಕ್ಷೇಪ್‌, 6–4, 6–3ರಲ್ಲಿ ತರುಣ್‌ ಅನಿರುದ್ಧ್‌ ಅವರನ್ನು ಮಣಿಸಿದರು. ರಿಷಿ ರೆಡ್ಡಿ, 6–1, 6–4ರಲ್ಲಿ ಸೂರ್ಯ ಇಳಂಗೋವನ್ ಅವರನ್ನು ಸೋಲಿಸಿದರು.

ಇದೇ ವಿಭಾಗದ ಇತರ ಪಂದ್ಯಗಳಲ್ಲಿ ಯಶವಂತ್‌ ಲೋಗನಾಥನ್‌, 6–4, 6–3ರಲ್ಲಿ ಅರ್ಜುನ್‌ ಮಹದೇವನ್‌ ವಿರುದ್ಧ, ಭರತ್‌ ನಿಶೋಕ್‌ ಕುಮಾರ್‌ 6–2, 6–4ರಲ್ಲಿ ದೀಪಕ್‌ ಸ್ನೇಹಿತ್‌ ಕುಮಾರ್‌ ವಿರುದ್ಧ ಗೆದ್ದರು.

ADVERTISEMENT

ಮಹಿಳೆಯರ ಸಿಂಗಲ್ಸ್‌ ವಿಭಾಗದ ಕ್ವಾರ್ಟರ್‌ ಫೈನಲ್‌ನಲ್ಲಿ ಎಸ್‌. ಸೋಹಾ, 6–1, 6–4ರಲ್ಲಿ ಅನುಷಾ ಅವರನ್ನು ಮಣಿಸಿ ನಾಲ್ಕರ ಘಟ್ಟ ಪ್ರವೇಶಿಸಿದರು. ಮತ್ತೊಂದು ಪಂದ್ಯದಲ್ಲಿ ಎಸ್‌.ಅಪೂರ್ವಾ ಅವರನ್ನು 6–1, 63ರಲ್ಲಿ ಮಣಿಸಿದ ಟಿ.ಶ್ರೇಯಾ ಸೆಮಿಫೈನಲ್‌ ಪ್ರವೇಶಿಸಿದರು.

ಪುರುಷರ ಡಬಲ್ಸ್‌ನಲ್ಲಿ ಭರತ್‌ ನಿಶೋಕ್‌ ಕುಮಾರ್‌–ಉಮೈರ್‌ ಶಾ ಜೋಡಿ 6–3, 6–4ರಲ್ಲಿ ಸೂರ್ಯ ಇಳಂಗೋವನ್‌-ಪಿ. ಬಾಬು ಮೇಲೆ, ದೀಪಕ್‌ ಕುಮಾರ್‌-ಆರ್ಯನ್‌ ಪತಂಗೆ ಜೋಡಿ, 6-4, 7-5ರಲ್ಲಿ ಇಫ್ತಿಕರ್‌ ಶೈಕ್‌ ಮೇಲೆ ಗೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.