ADVERTISEMENT

ಟೆನಿಸ್‌: ಕ್ವಾರ್ಟರ್‌ಫೈನಲ್‌ಗೆ ನಿಕ್ಷೇಪ್‌

​ಪ್ರಜಾವಾಣಿ ವಾರ್ತೆ
Published 23 ಜನವರಿ 2020, 14:50 IST
Last Updated 23 ಜನವರಿ 2020, 14:50 IST
ಬಿ.ಆರ್‌. ನಿಕ್ಷೇಪ್‌
ಬಿ.ಆರ್‌. ನಿಕ್ಷೇಪ್‌   

ಬೆಂಗಳೂರು: ಕನ್ನಡಿಗ ಬಿ.ಆರ್‌. ನಿಕ್ಷೇಪ್‌ ಚೆನ್ನೈನಲ್ಲಿ ನಡೆಯುತ್ತಿರುವ ಎಐಟಿಎ ಟೆನಿಸ್‌ ಟೂರ್ನಿಯ ಸಿಂಗಲ್ಸ್‌ ವಿಭಾಗದಲ್ಲಿ ಮಂಗಳವಾರ ಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟರು.

ಎರಡನೇ ಸುತ್ತಿನ ಹಣಾಹಣಿಯಲ್ಲಿ ಆರನೇ ಶ್ರೇಯಾಂಕದ ನಿಕ್ಷೇಪ್‌, ಕರ್ನಾಟಕದವರೇ ಆದ ಮನೀಷ್‌ ಜಿ. ಅವರನ್ನು 6–4, 3–6, 6–2ರಿಂದ ಸೋಲಿಸಿದರು. ರಾಜ್ಯದ ಮತ್ತೊಬ್ಬ ಆಟಗಾರ ವಸಿಷ್ಠ ಚೆರುಕು ಕೂಡ ಎಂಟರಘಟ್ಟ ಪ್ರವೇಶಿಸಿದರು. ಅವರು ಎರಡನೇ ಶ್ರೇಯಾಂಕದ ಗೋಕುಲ್‌ ಸುರೇಶ್‌(ಪಂದ್ಯದಿಂದ ನಿವೃತ್ತಿ) ಅವರನ್ನು 6–1, 2–0ರಿಂದ ಮಣಿಸಿದರು.

ಕ್ವಾರ್ಟರ್‌ಫೈನಲ್‌ನಲ್ಲಿ ನಿಕ್ಷೇಪ್‌ ಅವರು ಆಂಧ್ರಪ್ರದೇಶದ ಕಜಾ ವಿನಾಯಕ ಶರ್ಮಾ ಅವರನ್ನು ಎದುರಿಸಲಿದ್ದರೆ, ವಸಿಷ್ಠ ತಮಿಳುನಾಡಿನ ಭರತ್‌ ನಿಶೋಕ್‌ ವಿರುದ್ಧ ಆಡಲಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.