ADVERTISEMENT

ಕೆಎಸ್‌ಎಲ್‌ಟಿಎಗೆ ಬೋಪಣ್ಣ ಉಪಾಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2020, 19:45 IST
Last Updated 13 ಮಾರ್ಚ್ 2020, 19:45 IST
ರೋಹನ್‌ ಬೋಪಣ್ಣ
ರೋಹನ್‌ ಬೋಪಣ್ಣ   

ಬೆಂಗಳೂರು: ಟೆನಿಸ್ ಆಟಗಾರರೋಹನ್‌ ಬೋಪಣ್ಣ ಅವರು ಕರ್ನಾಟಕ ರಾಜ್ಯ ಲಾನ್‌ ಟೆನಿಸ್‌ ಸಂಸ್ಥೆಯ (ಕೆಎಸ್‌ಎಲ್‌ಟಿಎ) ಉಪಾಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ. ಇತ್ತೀಚೆಗೆ ನಡೆದ ಕೆಎಸ್‌ಎಲ್‌ಟಿಎ ವಾರ್ಷಿಕ ಸಾಮಾನ್ಯ ಸಭೆಯಲ್ಲಿ (ಎಜಿಎಂ) ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿತ್ತು. ಈ ಕುರಿತು ಸಂಸ್ಥೆಯುಗುರುವಾರ ಪ್ರಕಟಣೆ ನೀಡಿದೆ.

ಈಗ ಆಯ್ಕೆಯಾದ ಪದಾಧಿಕಾರಿಗಳ ಅವಧಿ ನಾಲ್ಕು ವರ್ಷಗಳದ್ದಾಗಿದೆ.

ಪದಾಧಿಕಾರಿಗಳು: ಆರ್‌.ಅಶೋಕ (ಅಧ್ಯಕ್ಷ), ಎಂ. ಲಕ್ಷ್ಮೀನಾರಾಯಣ (ಆಜೀವ ಉಪಾಧ್ಯಕ್ಷ), ಪ್ರಿಯಾಂಕ್‌ ಎಂ. ಖರ್ಗೆ (ಹಿರಿಯ ಉಪಾಧ್ಯಕ್ಷ), ಎಂ.ಬಿ.ದ್ಯಾಬೇರಿ, ಪಿ.ಆರ್‌.ರಾಮಸ್ವಾಮಿ, ರೋಹನ್‌ ಬೋಪಣ್ಣ, ಆಶಿಶ್‌ ಪುರವಂಕರ (ಎಲ್ಲರೂ ಉಪಾಧ್ಯಕ್ಷರು), ಮಹೇಶ್ವರ ರಾವ್‌ (ಕಾರ್ಯದರ್ಶಿ), ಸುನಿಲ್‌ ಯಜಮಾನ್‌ (ಜಂಟಿ ಕಾರ್ಯದರ್ಶಿ), ನಾಗಾನಂದ ದೊರೆಸ್ವಾಮಿ (ಖಜಾಂಚಿ).

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.