ಬೆಂಗಳೂರು: ಮಹಾರಾಷ್ಟ್ರದ ಸಾಹಿಲ್ ಗವಾರೆ, ಇಲ್ಲಿ ನಡೆಯುತ್ತಿರುವ ಎಐಟಿಎ ಬೆಂಗಳೂರು ಓಪನ್ ವೈಲ್ಡ್ ಕಾರ್ಡ್ ಟೆನಿಸ್ ಟೂರ್ನಿಯ ಪ್ರೀ ಕ್ವಾರ್ಟರ್ ಫೈನಲ್ಗೆ ಲಗ್ಗೆ ಇರಿಸಿದರು. ಕರ್ನಾಟಕ ಲಾನ್ ಟೆನಿಸ್ ಸಂಸ್ಥೆಯ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಅವರು ಆಂಧ್ರಪ್ರದೇಶದ ವಿಘ್ನೇಶ್ ಪೆರೆನಮಲ್ಲೂರು ಅವರನ್ನು 6–2, 6–2ರಿಂದ ಮಣಿಸಿದರು. ಸಾಹಿಲ್ ಟೂರ್ನಿಯಲ್ಲಿ ಶ್ರೇಯಾಂಕರಹಿತರಾಗಿದ್ದು ವಿಘ್ನೇಶ್ ಐದನೇ ಶ್ರೇಯಾಂಕ ಹೊಂದಿದ್ದರು.
ಪಂಜಾಬ್ನ ದಲ್ವಿಂದರ್ ಸಿಂಗ್ ಕರ್ನಾಟಕದ ಮನೀಷ್ ಜಿ ಅವರನ್ನು 6–2, 6–4ರಿಂದ ಸೋಲಿಸಿದರು. ಮೂರನೇ ಶ್ರೇಯಾಂಕ ಹೊಂದಿರುವ, ಕರ್ನಾಟಕದ ಪ್ರಜ್ವಲ್ ದೇವ್ 6–1, 6–0ಯಿಂದ ಆಂಧ್ರಪ್ರದೇಶದ ರಿಷಭ್ ಅಗರವಾಲ್ ಅವರನ್ನು ಮಣಿಸಿದರು.
ತಮಿಳುನಾಡಿನ ವಿಗ್ನೇಶ್ ವೀರಭದ್ರನ್ ಮಹಾರಾಷ್ಟ್ರದ ಶಹಬಾಜ್ ಖಾನ್ ಅವರನ್ನು 6–4, 6–4ರಿಂದ, ತಮಿಳುನಾಡಿನ ಫಹಾದ್ ಮೊಹಮ್ಮದ್ 6–2, 6–3ರಿಂದ ಹೇವಂತ್ ವಿ ಕುಮಾರ್ ಅವರನ್ನು, ತಮಿಳುನಾಡಿನ ಅರ್ಜುನ್ ಮಹಾದೇವನ್ ಅದೇ ರಾಜ್ಯದ ಇಹಸಾನ್ ಹುಸೇನ್ ಮೊಹಮ್ಮದ್ ಅವರನ್ನು 6–2, 6–1ರಿಂದ, ಕರನಾಟಕದ ಅರ್ಣವ್ ಪತಂಗೆ ಕರ್ನಾಟಕದವರೇ ಆದ ಅಲೋಕ್ ಆರಾಧ್ಯ ಅವರನ್ನು 6–3, 4–6, 6–4ರಿಂದ, ಕರ್ನಾಟಕದ ನಾಸರ್ ಜೇವೂರ್ ತೆಲಂಗಾಣದ ಕೃಷ್ಣ ತೇಜ ಅಂಕಮ್ ಅವರನ್ನು 6–3, 6–0ಯಿಂದ, ಕರ್ನಾಟಕದ ಅರ್ಜುನ್ ಹೊನ್ನಪ್ಪ 6–2, 6–3ರಿಂದ ಸಿದ್ದಾರ್ಥ್ ಆರ್ಯ ಅವರನ್ನು ಸೋಲಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.