
ಪ್ರಜಾವಾಣಿ ವಾರ್ತೆ
ಧಾರವಾಡ: ಬೆಂಗಳೂರಿನ ತಮೋಘ್ನ ಮತ್ತು ರಾಶಿ ರಾವ್ ಅವರು ರಾಜ್ಯ ರ್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ 15 ವರ್ಷದೊಳಗಿನ ಬಾಲಕ, ಬಾಲಕಿಯರ ವಿಭಾಗದ ಸಿಂಗಲ್ನಲ್ಲಿ ಪ್ರಶಸ್ತಿ ಜಯಿಸಿದರು.
ಕಾಸ್ಮೋಸ್ ಕ್ಲಬ್ ಆಯೋಜಿಸಿರುವ ಟೂರ್ನಿಯ ಬಾಲಕರ ವಿಭಾಗದ ಫೈನಲ್ನಲ್ಲಿ ತಮೋಘ್ನ 12-10, 11-7, 11-5, 11-2 ರಿಂದ ಬೆಂಗಳೂರಿನ ಅಮಾನ್ ಜಾರ್ಜ್ ಥಾಮಸ್ ಅವರನ್ನು ಸೋಲಿಸಿದರು.
ಬಾಲಕಿಯರ ವಿಭಾಗದ ಫೈನಲ್ನಲ್ಲಿ ರಾಶಿ ರಾವ್ 9-11, 11-7, 9-11, 11-6, 11-9 ರಿಂದ ಬೆಂಗಳೂರಿನ ಮಿಹಿಕಾ ಉಡುಪ ಅವರನ್ನು ಮಣಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.