ಬೆಂಗಳೂರು: ಸಂಚಿತ್ ಸುಧೀರ್ ರಾವ್ ಮತ್ತು ವರುಣ್ಯಾ ಸಿ.ಎನ್. ಅವರು ಇಲ್ಲಿ ನಡೆದ ಎಐಟಿಎ ಟಿಎಸ್–3 14 ವರ್ಷದೊಳಗಿನವರ ಟೆನಿಸ್ ಟೂರ್ನಿಯಲ್ಲಿ ಗುರುವಾರ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
ರಾಜ್ಯ ಲಾನ್ ಟೆನಿಸ್ ಸಂಸ್ಥೆಯ (ಕೆಎಸ್ಎಲ್ಟಿಎ) ಸಹಯೋಗದೊಂದಿಗೆ ಫಾರ್ಚುನ್ ಸ್ಪೋರ್ಟ್ಸ್ ಅಕಾಡೆಮಿ ಆಯೋಜಿಸಿದ್ದ ಟೂರ್ನಿಯ ಬಾಲಕರ ಸಿಂಗಲ್ಸ್ ಫೈನಲ್ನಲ್ಲಿ ಸಂಚಿತ್ 6-3, 6-7 (3), 7-5ರಿಂದ ಶ್ರೀಕರ್ ಡೋಣಿ ಅವರನ್ನು ಸೋಲಿಸಿದರು. ಬಾಲಕಿಯರ ಸಿಂಗಲ್ಸ್ ಫೈನಲ್ನಲ್ಲಿ ಮೈಸೂರಿನ ವರುಣ್ಯಾ 6-2, 6-2ರಿಂದ ಅಗ್ರಶ್ರೇಯಾಂಕದ ಮಹಿಕಾ ರೆಡ್ಡಿ ಅವರಿಗೆ ಸೋಲುಣಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.