ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಇಡೀ ದೇಶವೇ ಈ ಸಂಭ್ರಮಾಚರಣೆ ಮಾಡುತ್ತಿದೆ.
ದೇಶದ ಪ್ರತಿ ಮನೆ ಮನೆಯಲ್ಲೂ ತ್ರಿವರ್ಣ ಧ್ವಜ ಹಾರಿಸಿ ಜನರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಹೋರಾಟಗಾರರಿಗೆ ಗೌರವ ಸಲ್ಲಿಸಿದ್ದಾರೆ. ಬಾಲಿವುಡ್ ಕಲಾವಿದರು, ಕ್ರಿಕೆಟ್ ತಾರೆಯರು ಕೂಡ ಈ ಅಮೃತ ಮಹೋತ್ಸವವನ್ನು ಸಂಭ್ರಮದಿಂದ ಬರಮಾಡಿಕೊಂಡಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ಕ್ರಿಕೆಟ್ ತಾರೆಯರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಪೂಜಾರ, ಲಕ್ಷ್ಮಣ್, ಮಹಿಳಾ ಕ್ರಿಕೆಟ್ ತಾರೆ ಮಿತಾಲಿ ರಾಜ್, ಗೋಸ್ವಾಮಿ, ಹಾಕಿ ಆಟಗಾರರಾದ ಶ್ರೀಜೆಶ್, ರಾಣಿ ರಾಂಪಾಲ್, ಕ್ರೀಡಾಪಟುಗಳಾದ ಸಾಕ್ಷಿ ಮಲಿಕ್, ವಿರೇಂದ್ರ ಸಿಂಗ್, ಲಕ್ಷ್ಯಾ ಸೇನ್ ಸೇರಿದಂತೆ ಹಲವರುಅಮೃತ ಮಹೋತ್ಸಕ್ಕೆ ಶುಭಾಶಯಗಳನ್ನು ಕೋರಿದ್ದಾರೆ.
ಬಾಲಿವುಡ್ ತಾರೆಗಳಾದ ಅಜಯ್ ದೇವಗನ್, ಅಕ್ಷಯ್ ಕುಮಾರ್ ಅನುಷ್ಕಾ ಶರ್ಮಾ, ಪ್ರಿಯಾಂಕಾ ಚೋಪ್ರಾ, ಸಲ್ಮಾನ್ ಖಾನ್, ಶಾರೂ ಖಾನ್, ಅನಿಲ್ ಕಪೂರ್, ಅಮಿತಾಬ್ ಕುಟುಂಬದವರು, ಮಾದವನ್ ಸೇರಿದಂತೆ ಅನೇಕ ಬಾಲಿವುಡ್ ತಾರೆಯರು ಶುಭಾಶಯಗಳನ್ನು ಕೋರಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.