ADVERTISEMENT

ಕಾಗವಾಡ | ವೈರಲ್ ಆಗಿದೆ ‘ಹೌದು ಹುಲಿಯಾ’ ಡೈಲಾಗ್

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2019, 10:32 IST
Last Updated 16 ಡಿಸೆಂಬರ್ 2019, 10:32 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಳಗಾವಿ: ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕಾಗವಾಡದಲ್ಲಿ ಕ್ಷೇತ್ರದ ಉಪ ಚುನಾವಣಾ ಪ್ರಚಾರ ಸಭೆಯಲ್ಲಿ ಈಚೆಗೆ ಮಾತನಾಡುತ್ತಿದ್ದ ವೇಳೆ ವ್ಯಕ್ತಿಯೊಬ್ಬರು ಹೊಡೆದಿದ್ದ ಡೈಲಾಗ್‌ ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿದೆ.

ಸಿದ್ದರಾಮಯ್ಯ ಅವರು, ‘ಇಂದಿರಾಗಾಂಧಿ ದೇಶಕ್ಕೋಸ್ಕರ ಪ್ರಾಣ ತೆತ್ತರು’ ಎನ್ನುತ್ತಿದ್ದಂತೆಯೇ, ಜನರ ಸಾಲಿನಲ್ಲಿದ್ದ ವ್ಯಕ್ತಿಯೊಬ್ಬ ‘ಹೌದು ಹುಲಿಯ’ ಎಂದಿದ್ದರು.

‘ಯಾರಯ್ಯಾ ಅಂವ ಹೇ ಕಳುಸ್ರೀ ಅವ್ನ ಆಚೆಗೆ. ಸುಮ್ನೆ ಕುತ್ಕಬೇಕು. ಇನ್ನೊಂದ್ಸಾರಿ ಮಾತಾಡುದ್ರೆ ಕಳಿಸ್ಬಿಡ್ತಿನಿ ಆಚೆಗೆ. ಬೆಳಿಗ್ಗೆನೇ ಗುಂಡ್ ಹಾಕ್ಬಿಟ್ಟವ್ನೆ ನೆಡಿಯೊ, ಕಳುಸ್ರೀ ಅವ್ನ ಆಚೆಗೆ’ ಎಂದು ಹೇಳಿದ್ದ ಸಿದ್ದರಾಮಯ್ಯ ಮಾತು ಮುಂದುವರಿಸಿದ್ದರು.

ADVERTISEMENT

ಇದೂ ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿತ್ತು. ಈ ಸನ್ನಿವೇಶದ ಡೈಲಾಗ್‌ಗಳನ್ನು ಆಧರಿಸಿ ಕೆಲವರು ಮರುಸೃಷ್ಟಿ ಮಾಡಿರುವ ವಿಡಿಯೊಗಳು ಟ್ರೆಂಡ್‌ ಆಗುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.