ಬೆಂಗಳೂರು: ತಮಿಳುನಾಡಿನ ತಿರುವಣೈಕವಲ್ನಲ್ಲಿರುವ ಶಿವ ದೇವಸ್ಥಾನ ಜಂಬುಕೇಶ್ವರ ಮಂದಿರದ ಆನೆ ಅಖಿಲಾ ಜನ್ಮದಿನದ ಅಂಗವಾಗಿ ನೀಡಿದ ಹಣ್ಣುಹಂಪಲುಗಳನ್ನು ಸವಿಯುತ್ತಿರುವ ವಿಡಿಯೊ ಎಲ್ಲರ ಮನ ಗೆದ್ದಿದೆ.
ಮಹೀಂದ್ರಾ ಗ್ರೂಪ್ನ ಮುಖ್ಯಸ್ಥ ಆನಂದ್ ಮಹೀಂದ್ರಾ ಈ ವಿಡಿಯೊವನ್ನು ಟ್ವೀಟ್ನಲ್ಲಿ ಹಂಚಿಕೊಂಡಿದ್ದಾರೆ.
'ತಿರುವಣೈಕವಲ್ ದೇವಸ್ಥಾನದ ಆನೆ ಅಖಿಲಾಳ ಜನ್ಮದಿನದ ಸಂಭ್ರಮದ ವಿಡಿಯೊ ತುಣುಕಿದು. ಆಕೆ ತಲೆಯನ್ನು ಅಲ್ಲಾಡಿಸುವ ಶೈಲಿ ತುಂಬ ಇಷ್ಟವಾಯಿತು. ಅವಳ ಸಂತೋಷ ಎಲ್ಲರಿಗೂ ಹರಡುವಂತದ್ದಾಗಿದೆ. ಜೀವನೋತ್ಸಾಹವನ್ನು ಹೆಚ್ಚಿಸಲು ನೋಡಲೇಬೇಕಾದ ಅತ್ಯುತ್ತಮ ವಿಡಿಯೊ ಇದು' ಎಂದು ಆನಂದ್ ಮಹೀಂದ್ರಾ ಶ್ಲಾಘಿಸಿದ್ದಾರೆ.
ಮೇ 24ರಂದು ಅಖಿಲಾಗೆ 20ನೇ ವರ್ಷದ ಜನ್ಮದಿನವಾಗಿದೆ. ಈ ಪ್ರಯುಕ್ತ ದೇವಸ್ಥಾನದಲ್ಲಿ 'ಗಜಪೂಜೆ'ಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭ ದೇಗುಲದ ಸಿಬ್ಬಂದಿ ನೀಡಿದ ಕಲ್ಲಂಗಡಿ, ಸೀಬೇಹಣ್ಣು, ಸೇಬು ಸೇರಿದಂತೆ ಹಲವು ಬಗೆಯ ಹಣ್ಣುಹಂಪಲುಗಳನ್ನು ತಿನ್ನುತ್ತಿರುವ ವಿಡಿಯೊ ಇದಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.